ಸಹಾಬಿಗಳ ಹೆಜ್ಜೆಗುರುತು

Author : ಅಬ್ದುಲ್ ರಝಾಕ್ ಕೆಮ್ಮಾರ

Pages 182

₹ 75.00




Published by: ಸ್ತುತಿ ಪ್ರಕಾಶನ
Address: ಸಹಕಾರಿ ಸದನ, ಮಿಷನ್ ಸ್ಟ್ರೀಟ್, ಮಂಗಳೂರು - 575001
Phone: 9895581034

Synopsys

‘ಸಹಾಬಿಗಳ ಹೆಜ್ಜೆಗುರುತು’ ಅಬ್ದುಲ್ ರಝಾಕ್ ಕೆಮ್ಮಾರ ಅವರ ಅನುವಾದಿತ ಕೃತಿಯಾಗಿದೆ. ಎ. ಐ.ಐ.ವಿಲಾಯತುಲ್ಲಾ ಕೃತಿಯ ಮೂಲ ಕರ್ತೃ. ವಿವಿಧ ಕಾಲಗಳಲ್ಲಿದ್ದ ಪ್ರವಾದಿಗಳು ಆಯಾ ಕಾಲದ ತಮ್ಮ ಜನರು ಎದುರಿಸುತ್ತಿದ್ದ ಮುಖ್ಯ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಿದ್ದರು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.

ಬಹುದೇವಾರಾಧನೆ, ಆರ್ಥಿಕ ಶೋಷಣೆ, ರಾಜಕೀಯ ದಾಸ್ಯತನ, ಲೈಂಗಿಕ ಅರಾಜಕತೆ, ಪುರೋಹಿತಶಾಹಿ ಮೊದಲಾದ ಸಮಸ್ಯೆಗಳಿಗೆ ಅವರು ಇಸ್ಲಾಮಿನ ಮೂಲಕ ಪರಿಹಾರ ಕಂಡುಕೊಂಡರು. ಪೂರ್ವಿಕರಾದ ವಿದ್ವಾಂಸರು ಈ ಮಾದರಿಗಳನ್ನುಎತ್ತಿ ಹಿಡಿದಿದ್ದರು. ನೂರಾರು ವರ್ಷಗಳ ಕಾಲ ಕೇರಳದ ಕರಾವಳಿಯು ವಸಾಹತುಶಾಹಿ ಶಕ್ತಿಗಳ ಕೈಗಳಲ್ಲಿ ಅಮರಿಕೊಂಡಾಗ ಅಂದಿನ ವೀರವಿದ್ವಾಂಸರು ಹೋರಾಟದ ಕರೆ ನೀಡಿ ಜನರ ಮಧ್ಯೆ ಇಳಿದರು ಮತ್ತು ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದನ್ನು ಇತಿಹಾಸದಲ್ಲಿ ಕಾಣಬಹುದು ಎಂಬುದು ಇಲ್ಲಿ ಬಿಂಬಿತವಾಗಿದೆ. ಪೂರ್ವಿಕರ ಸತ್ಯಪಥದಲ್ಲಿ ಅಭಿಮಾನವನ್ನು ತೋರ್ಪಡಿಸುವ ಆಧುನಿಕ ವಿದ್ವಾಂಸರು, ತಾವು ಕಳೆದುಕೊಂಡಿರುವ ಹೋರಾಟ ಸಂಸ್ಕೃತಿಯ ಪರಂಪರೆಯನ್ನು ಮರಳಿ ಪಡೆಯುವ ಕುರಿತಂತೆ ಆಲೋಚಿಸಬೇಕಾದ ಅಗತ್ಯವಿದೆ. ಹೀಗೆ ಈ ಕೃತಿಯು ಅನೇಕ ವಿಚಾರಗಳನ್ನು, ಆಗು ಹೋಗುಗಳನ್ನು ಕಟ್ಟಿಕೊಡುತ್ತದೆ.

About the Author

ಅಬ್ದುಲ್ ರಝಾಕ್ ಕೆಮ್ಮಾರ

ಲೇಖಕ ಅಬ್ದುಲ್ ರಝಾಕ್ ಕೆಮ್ಮಾರ ಅವರು ಮೂಲತಃ ಮಂಗಳೂರಿನವರು. ಪಿಎಫ್.ಐ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ‘ಪ್ರಸ್ತುತ’  ಎಂಬ ಪಾಕ್ಷಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಹಾಬಿಗಳ ಹೆಜ್ಜೆಗುರುತುಗಳು ...

READ MORE

Related Books