‘ಚಂದ್ರಕಾಂತ ಕರದಳ್ಳಿ’ ಶೈಲಜಾ ಎನ್. ಬಾಗೇವಾಡಿ ಅವರ ವಾಚಿಕೆ 17 ವ್ಯಕ್ತಿಚಿತ್ರಣವಾಗಿದೆ. ಕೃತಿಗೆ ಸಿದ್ದಲಿಂಗ ಬ. ಕೊನೇಕ ಅವರು ಬೆನ್ನುಡಿ ಬರಹವಿದೆ; ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ. ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ನಮ್ಮ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗದ ಮಡಿಲಿಗೆ ಅರ್ಪಿಸುವುದು ನಮ್ಮ ಸದುದ್ದೇಶವಾಗಿದೆ. ಚಂದ್ರಕಾಂತ ಕರದಳ್ಳಿಯವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ನಿಮ್ಮ ಕೈಯಲ್ಲಿದೆ. ಚಂದ್ರಕಾಂತ ಕರದಳ್ಳಿಯವರಿಂದ ರಚಿತವಾದ ಸಾಹಿತ್ಯ ಡ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ಕೂಡಾ ಲಭಿಸಿದೆ. ಅವರ ಒಟ್ಟು ಸಾಹಿತ್ಯದ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ಲೇಖಕಿ ಡಾ.ಶೈಲಜಾ ಎನ್. ಬಾಗೇವಾಡಿ ಅವರು ಗ್ರಾಮೀಣ ನೆಲೆಯ ಕೂಡು ಕುಟುಂಬದಿಂದ ಬಂದವರು. ಪ್ರಾಚೀನ, ಆಧುನಿಕ ಕನ್ನಡ ಸಾಹಿತ್ಯದ ಎಲ್ಲಸ್ಥಿತ್ಯಂತರಗಳನ್ನೂ ಅಧ್ಯಯನದ ಮೂಲಕ ಅರಿಯಲಿಚ್ಚಿಸುವ ಅವರು ಅದನ್ನು ತಮ್ಮ ಬರವಣಿಗೆಯ ಶ್ರದ್ದೆಯಲ್ಲಿ ತೋರುಗಾಣಿಸಿರುತ್ತಾರೆ. ಯಾದಗಿರಿ ಜಿಲ್ಲೆಯ ಶಹಾಪೂರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದು, ಅಧ್ಯಾಪನದ ಜೊತೆ ಸಾಹಿತ್ಯ ವ್ಯವಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ. ವಿಮರ್ಶೆ, ಸಂಶೋಧನೆ, ಪ್ರವಾಸ ಹಾಗೂ ಜಾನಪದ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿವೆ. ಡಾ.ಎಸ್.ಎಲ್ ಭೈರಪ್ಪನವರ ಕಾದಂಬರಿಗಳ ಕುರಿತು ಮಹಾಪ್ರಬಂಧ ರಚಿಸಿರುವ ಡಾ.ಶೈಲಜಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಪಡೆದು ...
READ MORE