ಲೇಖಕ ಡಾ. ಎಚ್. ಟಿ. ಪೋತೆ ಅವರು ಸಂಪಾದಿಸಿದ ಕೃತಿ-ಕರ್ನಾಟಕದ ದಲಿತ ಜಾನಪದ ವಿದ್ವಾಂಸರು’. 30 ಜನ ದಲಿತ ಜಾನಪದ ವಿದ್ವಾಂಸರ ಸಂಕ್ಷಿಪ್ತ ಪರಿಚಯವಿದೆ. ಡಾ. ಸಿದ್ದಲಿಂಗಯ್ಯ, ಪಿ.ಕೆ ಖಂಡೊಬಾ, ಕೆ.ಆರ್.ದುರ್ಗದಾಸ್, ಸಣ್ಣರಾಮ, ಅರವಿಂದ ಮಾಲಗತ್ತಿ, ಡಾ. ಎಚ್. ಟಿ. ಪೋತೆ, ಅರ್ಜುನ ಗೊಳಸಂಗಿ, ಹರಿಲಾಲ್ ಪವಾರ್, ಚೆಲುವರಾಜು, ಡಾ.ಟಿ.ಎಂ ಭಾಸ್ಕರ್, ಡಾ. ಹನುಮಂತ ದೊಡ್ಡಮನಿ, ಡಾ.ಅಪ್ಪಗೆರೆ ಸೋಮಶೇಖರ್ ಹೀಗೆ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಅವರ ಕೊಡುಗೆಗಳನ್ನು ಸಂಪಾದಕರು ದಾಖಲಿಸಿದ್ದಾರೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE