'ದೀಪ್ತಿಮಂತರುʼ ಜೀವನಚರಿತ್ರೆ ಕೃತಿಯನ್ನು ಲೇಖಕ ಎಸ್.ಆರ್. ರಾಮಸ್ವಾಮಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಪತ್ರಿಕೋದ್ಯಮ, ಪಾರಂಪರಿಕ ಶಾಸ್ತ್ರಾಧ್ಯಯನ, ಸಮಾಜಜಾಗೃತಿ, ಸಂಗೀತ, ನೃತ್ಯ ಮೊದಲಾದ ಕ್ಷೇತ್ರಗಳನ್ನು ಪ್ರಜ್ವಲಗೊಳಿಸಿದ ಹಲವರು ಹಿಂದಿನ ಪೀಳಿಗೆಯ ಅಸಾಮಾನ್ಯ ಮಹನೀಯರ ಉನ್ನತ ಸಾಧನೆಗಳ ಸ್ಮರಣೆಯನ್ನು ಈಗಿನ ಮತ್ತು ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರಯತ್ನವನ್ನು ಈ ಪ್ರಬಂಧಗಳಲ್ಲಿ ಕಾಣಬಹುದು.ಸಮಾಜಾಭ್ಯುದಯಕ್ಕಾಗಿ ಧ್ಯೇಯೋನ್ಮುಖರಾಗಿ ಅವಿರತವಾಗಿ ಶ್ರಮಿಸಿ ಹೆಜ್ಜೆಗುರುತುಗಳನ್ನು ಉಳಿಸಿಹೋದವರು ಈ ಸಾಧಕರು. ಪ್ರತಿಕೂಲ ಪರಿಸರವನ್ನು ಲೆಕ್ಕಿಸದೆ ಅನನ್ಯ ಸಾಧನೆ ಮಾಡಿದ ಇಂತಹವರ ಸ್ಮರಣೆ ಅಭ್ಯುದಾಯಸಕ್ತಿಗೆ ಸದಾ ಸ್ಫೂರ್ತಿಪ್ರದವಾಗಿರುತ್ತದೆ. ವರ್ಷಗಳು ಕಳೆದಂತೆ ಇಂತಹ ಶ್ರೇಷ್ಠರ ಪ್ರಯಾಸಗಳು ವಿಸ್ಮರಣೆಗೊಳಗಾಗುವ ಸಂಭವವಿರುವುದಿಂದ ಅವರ ಜೀವನವೃತ್ತಗಳನ್ನು ಸ್ವಲ್ಪ ಮಟ್ಟಿಗಾದರೂ ದಾಖಲೆ ಮಾಡಿಡುವ ಅಗತ್ಯವಿದೆ. ಈ ಆಶಯದಿಂದ ಮೂಡಿರುವ, ಸ್ವತಃ ಲೇಖಕರ ದೀರ್ಘಕಾಲದ ಒಡನಾಟ ಹೊಂದಿರುವ ಆರು ವ್ಯಕ್ತಿಚಿತ್ರಣಗಳ ಸಂಕಲನ – ’ದೀಪ್ತಿಮಂತರು’.
ನಾಡೋಜ ಎಸ್.ಆರ್.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...
READ MORE