ಕರ್ನಾಟಕದ ಕಲಾವಿದರು ಇಡೀ ಭಾರತದ ಸಾಂಸ್ಕೃತಿಕ ವಾಹಕರೂ ಹೌದು. ಸಾಂಸ್ಕೃತಿಕ ಸಿರಿವಂತಿಕೆಯೂ ದೇಶದ ನೈಜ ಸಿರಿವಂತಿಕೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಾಹಿತ್ಯ, ಸಂಗೀತ, ನಾಟಕ, ನೃತ್ಯಕಲೆ, ಚಿತ್ರಕಲೆ, ಜನಪದಕಲೆ ಹೀಗೆ ವಿವಿದ ರಂಗಗಳಲ್ಲಿ ಜೀವ ತೇಯ್ದ ಮಹನೀಯರನ್ನು ಲೇಖಕ ಅ.ನ.ಕೃಷ್ಣರಾಯರು, ಅವರ ಸಾಧನೆಗಳೊಂದಿಗೆ ಗುರುತಿಸಿ, ಪರಿಚಯಿಸಿರುವುದು ‘ಕರ್ನಾಟಕದ ಕಲಾವಿದರು-ಭಾಗ-2' ರ ಹೆಗ್ಗಳಿಕೆ.
ಸೌಂದರ್ಯೋಪಾಸಕ ಮಿಣಜಗಿ, ದ್ವಾರಂ ವೆಂಕಟಸ್ವಾಮಿ ನಾಯ್ಡು, ಸಂಗೀತ ವಿದುಷಿ ನೀಲಮ್ಮ ಕಡಾಂಬಿ, ವೀಣೆ ನಾಗರಾಜ ರಾಯರು, ಸಂಗೀತ ವಿದುಷಿ ಚೊಕ್ಕಮ್ಮ, ಬಿ.ಟಿ. ರಾಜಪ್ಪ, ಸಿದ್ರಾಮಪ್ಪ, ಶಂಕರ ದೀಕ್ಷಿತ, ಉಭಯಕರ ಕೃಷ್ಣರಾವ್ ಸೇರಿದಂತೆ ಒಟ್ಟು 27 ಕಲಾವಿದರ ಸಾಧನೆಗಳೊಂದಿಗೆ ಪರಿಚಯವಿದೆ.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE