ಗಳಗನಾಥ ಮಾಸ್ತರರು

Author : ಶ್ರೀನಿವಾಸ ಹಾವನೂರ

Pages 96

₹ 160.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಗಳಗನಾಥ ಮಾಸ್ತರ’ ಶ್ರೀನಿವಾಸ ಹಾವನೂರ ಅವರು ಬರೆದಿರುವ ನುಡಿಚಿತ್ರಣವಾಗಿದೆ. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಬಿಡುಗಡೆಗೊಂಡ ಈ ಕೃತಿಯು ಗಳಗನಾಥರ ಜೀವನ ಚಿತ್ರಣವನ್ನು ತಿಳಿಸುತ್ತದೆ. ಗಳಗನಾಥ ಮಾಸ್ತರರ ಹೆಸರು ಕನ್ನಡಿಗರೆಲ್ಲರಿಗೂ ರೋಮಾಂಚನ ತರುವಂತಹದ್ದು. ಬರಹಗಾರರಾಗಿ ಅದನ್ನು ತಲೆ ಮೇಲೆ ಹೊತ್ತು ಮನೆ ಮನೆಗೆ ತಲುಪಿಸಿದ ಆದರ್ಶ ಪ್ರಕಾಶಕರೂ ಹೌದು. ಜೊತೆಗೆ ಮಾರಾಟಗಾರರಾಗಿ, ಕಲಿಕೆಯ ಚಳುವಳಿ ಇನ್ನು ಕನ್ನಡ ನಾಡಿನಲ್ಲಿ ಹರಡುತ್ತಿದ್ದ ಕಾಲದಲ್ಲಿ ಆದರ್ಶ ಶಿಕ್ಷಕರಾಗಿ ‘ಗಳಗನಾಥ ಮಾಸ್ತರ’ ಎಂದೇ ಹೆಸರಾದ ಅವರ ಕುರಿತು ಶ್ರೀನಿವಾಸ ಹಾವನೂರ ಅವರು ಬರೆದ ನುಡಿಚಿತ್ರಣ ಓದುಗರಿಗೆ ಇಲ್ಲಿ ಮುಖ್ಯವೆನ್ನಿಸುತ್ತದೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books