ಲೇಖಕ ಮಚ್ಛೇಂದ್ರ ಪಿ. ಅಣಕಲ್ ಅವರ ಕೃತಿ-ಬೀದರ ಜಿಲ್ಲೆಯ ಸಾಹಿತಿಗಳ ಪರಿಚಯ. ಹೆಸರೇ ಸೂಚಿಸುವಂತೆ ಬೀದರ ಜಿಲ್ಲೆಯ ಸಾಹಿತಿಗಳ ಹೆಸರುಗಳನ್ನು ಸಂಗ್ರಹ ಮಾಡಿ ಅವರ ಬದುಕು-ಸಾಹಿತ್ಯಕ ಸಾಧನೆಗಳನ್ನು ಸಂಕ್ಷಿಪ್ತವಾಗಿಯಾದರೂ ಸುಂದರವಾಗಿ ಕಟ್ಟಿಕೊಟ್ಟ ಕೃತಿ ಇದು. ಇದರಿಂದ, ಬೀದರ ಜಿಲ್ಲಾ ಸಾಹಿತಿಗಳ ಪರಿಚಯವನ್ನು ಒಂದೆಡೆ ನೀಡಿದಂತೆ ಮಾತ್ರವಲ್ಲ; ಸಾಹಿತಿಗಳ ಬದುಕಿನ ಸಾಧನೆಗಳ ಪಕ್ಷಿನೋಟವೂ ದೊರೆಯುತ್ತದೆ.
19ನೇ ಶತಮಾನದ ಆರಂಭದಿಂದ ಸಾಹಿತಿ, ಬರಹಗಾರರಾಗಿ ಆಗಿ ಹೋದ ತಿಪರಂತಿ ಮಾಸ್ತರರಿಂದ ಹಿಡಿದು ಈವರೆಗಿನ ಅಂದರೆ ಸುಮಾರು 585 ಕವಿ, ಸಾಹಿತಿ, ಲೇಖಕ ಹಾಗೂ ಹವ್ಯಾಸಿ ಬರಹಗಾರರ ಸಮಗ್ರ ಪರಿಚಯದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ಕರ್ನಾಟಕ ದಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಹಿತಿಗಳನ್ನು ಪರಿಚಯಿಸುವ ಕಳಕಳಿಯ ಕೃತಿ ಮೊದಲ ಬಾರಿಗೆ ಪ್ರಕಟವಾಗಿದೆ ಎಂಬ ಖ್ಯಾತಿ ಈ ಕೃತಿಗಿದೆ.
ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದಲ್ಲಿ 12-06-1979 ರಂದು ಜನಿಸಿದರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಎಂ.ಇಡಿ ಪದವೀಧರರು. ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ 'ಲಾಟರಿ'ಕತೆ ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ ...
READ MORE