ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರ ಸಂಪಾದನಾ ಕೃತಿ-ಸಾಂಸ್ಕೃತಿಕ ಸಾಧಕರು. ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಕಟ್ಟಿ ಬೆಳೆಸುವಲ್ಲಿ ಸಾವಿರಾರು ಜನರು ತಮ್ಮದೇ ನೆಲೆಯಲ್ಲಿ ಶ್ರಮಿಸಿದ್ದಾರೆ. ಶಾಸ್ತ್ರೀಯ ಭಾಷೆಯಾದ ಕನ್ನಡವನ್ನು ಮತ್ತು ಆ ಮೂಲಕ ಕನ್ನಡತನವನ್ನು ಉಳಿಸಿ ಬೆಳೆಸಿದವರು ಅಸಂಖ್ಯ. ಇಂತಹವರ ಚಾರಿತ್ರಿಕ ಪರಿಚಯವು ಈ ಕೃತಿಯ ಹೆಚ್ಚುಗಾರಿಕೆ. ಸಾಹಿತಿ ವಿಕ್ರಮ ವಿಸಾಜಿ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ತಮ್ಮವರ ಸಾಧನೆಗಳನ್ನು ಹಿಂತಿರುಗಿ ನೋಡುವ ಉತ್ಸಾಹ, ವಿವೇಕ ಇಲ್ಲಿಯ ಲೇಖನಗಳಲ್ಲಿವೆ. ಕೇವಲ ಸ್ಮರಣೆ ಮಾತ್ರವಿಲ್ಲ; ಹೊಸ ದಾರಿಗಳು ನಿರ್ಮಾಣವಾಗಬೇಕು ಎಂಬ ಹಂಬಲವಿದೆ. ಈ ಸಾಧಕರಿಂದ ತಮ್ಮ ಬದುಕಿಗೆ ಹೊಸ ತಿಳಿವಳಿಕೆಗಳು ಪಡೆಯಬೇಕು ಎಂಬ ಆಶಯವಿದೆ. ಸಮಾಜದ ಘನತೆಯನ್ನು ಹೊಸ ಬಗೆಯಲ್ಲಿ ಕಟ್ಟಬಹುದೆಂಬ ತುಡಿತವಿದೆ. ಹೀಗಾಗಿ, ಇಲ್ಲಿಯ ಬರಹಗಳು ಆಪ್ತವಾಗಿ ಮೂಡಿಬಂದಿವೆ. ಇಲ್ಲಿಯ ಲೇಖನಗಳು ವಿದ್ಯಾರ್ಥಿಗಳ ಆಲೋಚನಾ ಕ್ರಮವನ್ನು ಕಾಳಜಿಪೂರ್ವಕವಾಗಿ ರೂಪಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಯಂಕಮ್ಮ. ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ಅಣ್ಣನ ಆಸರೆಯಲ್ಲಿ ಬೆಳೆದರು. ಸೋದರಮಾವನ ನೆರವಿನಿಂದ ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಗೋಗಿಯಲ್ಲಿ ಪ್ರೌಢಶಿಕ್ಷಣದಿಂದ ಪದವಿ ಶಿಕ್ಷಣ ಪೂರೈಸಿದರು. ಗುಲಬರ್ಗಾ ವಿವಿಯಿಂದ ಎಂ.ಎ. ಶಿಕ್ಷಣ ಪಡೆದರು. ಲಿಂಗಣ್ಣ ಸತ್ಯಂಪೇಟೆ ಜೀವನ ಕುರಿತು ಎಂ.ಫಿಲ್ ಹಾಗೂ ಅಂಬಿಗರ ಚೌಡಯ್ಯ ಜೀವನ ಹಾಗೂ ವಚನ ಸಾಹಿತ್ಯ ಕುರಿತು ಪಿಎಚ್ ಡಿ ಪೂರೈಸಿದರು. ಸುರಪುರ ತಾಲೂಕಿನ ಕೆಂಭಾವಿ ಹಾಗೂ ಬೀದರ ಜಿಲ್ಲೆಯ ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ...
READ MORE