`ನೊಬೆಲ್-2017' ಈ ಕೃತಿಯನ್ನು ಡಾ. ಟಿ.ಎಸ್. ಚೆನ್ನೇಶ್ ಅವರು ಬರೆದಿದ್ದು, 2017ನೇ ಸಾಲಿನಲ್ಲಿ ವಿವಿಧ ಜ್ನಾನವಲಯದಲ್ಲಿ ನೊಬೆಲ್ ಪಡೆದ ಮಹನೀಯರನ್ನು ಪರಿಚಯಿಸಿದ ಕೃತಿ. ನೊಬೆಲ್ ಪ್ರಶಸ್ತಿಪುರಸ್ಕೃತರ ಬದುಕು-ಸಾಧನೆಗಳ ಕುರಿತು ವಿಸ್ತೃತವಾಗಿ ವಿವರಿಸಲಾಗಿದೆ.
ವಿಜ್ಞಾನ ಸಾಹಿತ್ಯದಲ್ಲಿ ಅತ್ಯಂತ ಆಸ್ಥೆಯುಳ್ಳ ಟಿ. ಎಸ್. ಚನ್ನೇಶ್ ಅವರು ಬೆಂಗಳೂರಿನ ಸೆಂಟರ್ ಫಾರ್ ಪಬ್ಲಿಕ್ ಅಂಡರ್ ಸ್ಟ್ಯಾಂಡಿಂಗ್ ಆಫ್ ಸೈನ್ಸ್ ನಲ್ಲಿ ಕೃಷಿ ವಿಜ್ಞಾನಿಯಾಗಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಕೃಷಿಯಲ್ಲಿ ರೈತ ಸಮಸ್ಯೆಗಳನ್ನು ಜ್ವಲಂತವಾಗಿ ಚಿತ್ರಿಸಿದ ಕೃತಿ ‘ಉಳುವವರ ಪರ ವಕಾಲತ್ತು’. ‘ಅನುರಣನ’ ಅವರ ವಿಜ್ಞಾನ ಲೇಖನಗಳ ಸಂಕಲನ. ‘ನೊಬೆಲ್ 2017’ ಹಾಗೂ ‘ಅಮೃತಬಿಂದು’ ಅವರ ಕೃತಿಗಳು. ...
READ MORE