ಡಿ ವಿ ಜಿ ಜ್ಞಾಪಕ ಚಿತ್ರಶಾಲೆ- 8 ಸಂಪುಟಗಳು (.ಸಾಹಿತಿ ಸಜ್ಜನ ಸಾರ್ವಜನಿಕ, ಕಲೋಪಾಸಕರು, ಸಾಹಿತ್ಯೋಪಾಸಕರು, ಮೈಸೂರು ದಿವಾನರು, ವೈದಿಕ ಧರ್ಮಸಂಪ್ರದಾಯಸ್ಥರು, ಹಲವಾರು ಸಾರ್ವಜನಿಕರು, ಹೃದಯ ಸಂಪನ್ನರು, ಸಂಕೀರ್ಣ ಸ್ಮೃತಿಸಂಪುಟ) ಒಳಗೊಂಡಿದೆ. ‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಡಿವಿಜಿ ಅವರು ಕನ್ನಡ ಸಾಹಿತ್ಯದಲ್ಲಿ ಉತ್ತಮ ಕೃತಿಗಳನ್ನು ಸೇರ್ಪಡೆ ಮಾಡಿಸಿದ್ದಾರೆ. ರಾಜಕೀಯ ಸೇರಿದಂತೆ ಸುಮಾರು 70ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದ ಡಿವಿಜಿ, ಅವರ ಕುರಿತೇ ಇತರೆ ಲೇಖಕರು ಬರೆದ ಕೃತಿಗಳ ಸಂಖ್ಯೆ-17ಕ್ಕೂ ಅಧಿಕ ಕೃತಿಗಳು ಸೇರಿವೆ. ಒಟ್ಟಿನಲ್ಲಿ, ಡಿವಿಜಿ ಎಂದರೆ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ, ಅಪ್ರತಿಮ, ಅಸಾಧಾರಣ ಚಿಂತಕ. ಮೇಲೆ ಸೂಚಿಸಿದ ಎಲ್ಲ 8 ಸಂಪುಟಗಳ ಸಮಗ್ರ ಕೃತಿಯೇ- ಡಿ ವಿ ಜಿ ಜ್ಞಾಪಕ ಚಿತ್ರಶಾಲೆ- 8 ಸಂಪುಟಗಳು
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE