‘ನೆರಳು ಚೆಲ್ಲಿದ ಮಾಮರ’ ಶಿವರಾಂ ಪೈಲೂರು ಅವರ ಸಂಪಾದನೆಯ ವ್ಯಕ್ತಿ ಚಿತ್ರಣವಾಗಿದೆ. ಕಷ್ಟದಲ್ಲಿದ್ದವರಿಗೆ ಬಡವರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದ ಓರ್ವ ಸಹೃದಯಿ ಅವರಾಗಿದ್ದರು. ಪೈಲೂರರನ್ನು ಬಲ್ಲ ಅನೇಕ ಗೆಳೆಯರು, ಹಿತೈಷಿಗಳು ಹಾಗೂ ಅವರಿಂದ ಉಪಕೃತರಾದ ಕೆಲವರಿಂದ ವ್ಯಕ್ತವಾದ ಇಲ್ಲಿನ ಅಭಿಪ್ರಾಯಗಳನ್ನು ಗಮನಿಸಿದರೆ ಅವರ ಹಿರಿಯ ವ್ಯಕ್ತಿತ್ವದ ಪರಿಚಯವಾದೀತು.
ಶಿವರಾಂ ಪೈಲೂರು ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿಯವರು. ಕೃಷಿ ಕುಟುಂಬದವರಾದ ಇವರು ಪತ್ರಿಕೋದ್ಯಮದಲ್ಲಿ ಎಂ.ಎ, ಮತ್ತು ಕೃಷಿ ಸಂವಹನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ೧೯೮೮ ರಲ್ಲಿ ಮಣಿಪಾಲದ ’ತರಂಗ’ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, ಬಳಿಕ ಕೊಚ್ಚಿನ್ ನ ಸಂಬಾರ ಮಂಡಳಿಯಲ್ಲಿ ಉದ್ಯೋಗವನ್ನು ಕೈಗೊಂಡರು. ಸ್ಪೈಸ್ ಇಂಡಿಯಾ ಕನ್ನಡ ಮಾಸಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ೧೯೯೧ ರಲ್ಲಿ ಕೇಂದ್ರ ಸರ್ಕಾರದ ಭಾರತೀಯ ಸಮಾಚಾರ ಸೇವೆಗೆ ಸೇರ್ಪಡೆಯಾದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆಕಾಶವಾಣಿ, ದೂರದರ್ಶನ ವಿವಿಧ ಹುದ್ದೆಗಳಲ್ಲಿ ಮಂಗಳೂರು, ಧಾರವಾಡ, ದೆಹಲಿ ಮತ್ತು ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಪರಿಸರ ...
READ MOREಹೊಸತು-2004- ಸಪ್ಟಂಬರ್
ಆಪ್ತವಲಯದಲ್ಲಿ ಮಂಗಳೂರು ''ಮಂಗಳೂರು ಅಜ್ಜ' ಎಂದೇ ಪ್ರಸಿದ್ಧರಾದ, ತಮ್ಮ ಜೀವಿತಾವಧಿಯಲ್ಲಿ ದಕ್ಷಿಣ ಕನ್ನಡಿಗರಿಗೆ ಅನೇಕ ಸದಭಿರುಚಿಯ ಪಾಠ ಕಲಿಸಿದ ಪೈಲೂರು ಲಕ್ಷ್ಮೀನಾರಾಯಣ ರಾವ್ ಅವರ ವ್ಯಕ್ತಿತ್ವದ ಪರಿಚಯ ನೀಡುವ ಕೃತಿ, ಜೇನು ವ್ಯವಸಾಯ, ದ.ಕ. ಕೃಷಿಕರ ಸಹಕಾರಿ ಮಾರಾಟ ಸಂಘದ ಸ್ಥಾಪನೆ, ಅಕ್ವೆರಿಯಂ ಮೀನು ಸಾಕಣೆ, ಅಂಚೆ ಚೀಟಿ ಸಂಗ್ರಹ ಇಂತಹ ಹಲವಾರು ಹವ್ಯಾಸಗಳನ್ನು ರೂಢಿಸಿಕೊಂಡಿದ್ದ ಇವರನ್ನು ಅರಿಯದ ಅಡಿಕೆ ಬೆಳೆಗಾರರೇ ಇಲ್ಲವೆಂದರೂ ಅತಿಶಯದ ಮಾತಲ್ಲ. ಕಷ್ಟದಲ್ಲಿದ್ದವರಿಗೆ ಬಡವರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದ ಓರ್ವ ಸಹೃದಯಿ ಅವರಾಗಿದ್ದರು. ಪೈಲೂರರನ್ನು ಬಲ್ಲ ಅನೇಕ ಗೆಳೆಯರು, ಹಿತೈಷಿಗಳು ಹಾಗೂ ಅವರಿಂದ ಉಪಕೃತರಾದ ಕೆಲವರಿಂದ ವ್ಯಕ್ತವಾದ ಇಲ್ಲಿನ ಅಭಿಪ್ರಾಯಗಳನ್ನು ಗಮನಿಸಿದರೆ ಅವರ ಹಿರಿಯ ವ್ಯಕ್ತಿತ್ವದ ಪರಿಚಯವಾದೀತು. ಇತ್ತೀಚೆಗೆ ನಿಧನರಾದ ಅವರ ನೆನಪಿಗೆ ಈ ಪುಸ್ತಕ.