`ಸ್ವಾತಂತ್ರ್ಯ ಹೋರಾಟದ ಹೀರೋಗಳು – ಭಾಗ 1' ಹೋರಾಟಗಾರರ ಜೀವನಗಾಥೆಯನ್ನು ದಾಖಲಿಸುವ ಕೃತಿ ಇದು. ಲೇಖಕ ಬಾಬು ಕೃಷ್ಣಮೂರ್ತಿ ಅವರು ರಚಿಸಿದ್ದಾರೆ. “ಸ್ವಾತಂತ್ರ್ಯ ಹೋರಾಟದ ಹೀರೋಗಳು” ಎಂದು ಹೆಸರು ಹೊತ್ತ ಹೊತ್ತಿಗೆಯಲ್ಲಿ ಭಾರತವನ್ನು ಮಹತ್ವಕ್ಕೆ ನಿಜವಾಗಿ ಏರಿಸಿದ ಮಹಾತ್ಯಾಗಿಗಳ ಹೋರಾಟದ ನೈಜ ಚಿತ್ರಣವಿದೆ. ಇದರ 28 ಅಧ್ಯಾಯಗಳು ನಿಮ್ಮ ರಕ್ತ ಹೆಪ್ಪುಗಟ್ಟಿಸುತ್ತವೆ. ಇಲ್ಲಿ ರಾಣೀ ಲಕ್ಷ್ಮೀಬಾಯಿ ಝಾನ್ಸಿ, ತಾತ್ಯಾಟೋಪಿ, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ತಮಿಳುನಾಡಿನ ಹುತಾತ್ಮರು, ಕೇರಳದ ಶೂರ ರಾಷ್ಟ್ರಭಕ್ತ ದೊರೆಗಳು, ಬ್ರಿಟೀಷರ ಕುತಂತ್ರ, ನಮ್ಮವರ ಒಳದ್ರೋಹ, ಭಾರತದ ದುರದೃಷ್ಟವನ್ನು ಚಿತ್ರಿಸುವಲ್ಲಿ ಲೇಖಕರು ಸಫಲರಾಗಿದಾರೆ.
ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...
READ MORE