ನಾಡೋಜ ಚೆನ್ನವೀರ ಕಣವಿ ಅವರ ’ಸ್ಮೃತಿ ಸೌರ’ಭ’ ವ್ಯಕ್ತಿಚಿತ್ರಣಗಳ ಕೃತಿಯಾಗಿದೆ. ಮಾಸ್ತಿ ನಾನು ಕಂಡಂತೆ, ವರಕವಿಯೊಂದಿಗೆ ಒಡನಾಟ, ಡಿವಿಜಿ ಸಂಸ್ಮರಣ, ಶಂಬಾ ಸಂಸ್ಕೃತಿ, ವಿ.ಸೀ. ಮಾಸದ ನೆನಪು, ಪ್ರೊ. ಶಿ.ಶಿ. ಬಸವನಾಳರು, ಕ್ರಾಂತಿಕಾರಿ ಕಾದಂಬರಿಕಾರ ಬಸವರಾಜ ಕಟ್ಟೀಮನಿ, ಕಲಬುರ್ಗಿ ನೆನಪುಗಳು, ಹಿರೇಮಲ್ಲೂರು ಈಶ್ವರನ್ ಹೀಗೆ 16 ಮಹನೀಯರ ಬದುಕು-ಬರೆಹಗಳ ಚಿತ್ರಣವಿದೆ. ಕಣವಿಯವರು ಚಿತ್ರಿಸುವ ಯಾವುದೇ ಮಹನೀಯರಲ್ಲಿ ವ್ಯಕ್ತಿಯ ಇತ್ಯಾತ್ಮಕ ಹಾಗೂ ಆದರ್ಶಗಳನ್ನು ಕಾಣಬಹುದು. ವ್ಯಂಗ್ಯ-ವಿಡಂಬನೆ ಇಲ್ಲ. ವ್ಯಕ್ತಿ ಚಿತ್ರಗಳ ತೌಲನಿಕ ಅಧ್ಯಯನಕ್ಕೆ ಈ ಕೃತಿ ಉಪಯುಕ್ತವಾಗಿದೆ.
‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...
READ MORE