ಸಿದ್ದು ಯಾಪಲಪರವಿ ಕಾರಟಗಿ ಅವರು ಬರೆದ ಡಾ. ಬಿ. ಎಫ್. ದಂಡಿನ ಅವರ ಬಾಳ ಕಥನವೇ “ದಣಿವರಿಯದ ದಾರಿ…”. ಆದರಣೀಯರೂ ಅನುಕರಣೀಯರೂ ಗದಗ ನಗರದ ಅಭಿನವ ಭೀಷ್ಮಾಚಾರ್ಯರೂ ಆದ ಶ್ರೀ ಬಿಷ್ಟಪ್ಪ ಫಕೀರಪ್ಪ ದಂಡಿನ ಅವರದು ದಣಿವರಿಯದ ಶತಕದೆಡೆಗೆ ಮುನ್ನಡೆಯುತ್ತಿರುವ ಬಾಳನಡಿಗೆ. ಇವರು ಸಾರ್ಥಕತೆಯತ್ತ ಸಾಗುತ್ತಿರುವ ವಿಶಿಷ್ಟ ಸಾಧಕರು. ದಣಿವರಿಯದ ದಾರಿ ಎಂಬ ಗ್ರಂಥದ ಮೂಲಕ ಇವರ ವ್ಯಕ್ತಿತ್ವವನ್ನು ಕನ್ನಡಿಗರಿಗೆ ಶ್ರೀ ಸಿದ್ದು ಯಾಪಲಪರವಿ ಸಮರ್ಥವಾಗಿ ತೆರೆದಿಟ್ಟಿದ್ದಾರೆ. ಸಿದ್ದು ಯಾಪಲಪರವಿ ಅವರ ಬರಹದಲ್ಲಿ ದಂಡಿನ ಅವರ ವ್ಯಕ್ತಿ ವೈಭವೀಕರಣ ಇಲ್ಲ; ವ್ಯಕ್ತಿ ಸ್ತುತಿ ಇಲ್ಲ. ಬದಲಾಗಿ ಅವರ ವ್ಯಕ್ತಿತ್ವದ ಸುಂದರ ಅನಾವರಣವಿದೆ. ‘ದಣಿವರಿಯದ ದಾರಿ’ಯ ಮೂಲಕ ಡಾ. ಬಿ. ಎಫ್. ದಂಡಿನ ಅವರು ನಾಡಿನಾದ್ಯಂತ ಇನ್ನೂ ಹೆಚ್ಚು ಜನರ ಹೃದಯಕ್ಕೆ ಹತ್ತಿರವಾಗಲಿದ್ದಾರೆ.
ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ. 1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ...
READ MORE