ಕನ್ನಡ ಸಾಹಿತ್ಯಕ್ಕೆ 2500 ವರ್ಷಗಳ ಇತಿಹಾಸವಿದ್ದರೆ ಕನ್ನಡ ಮಕ್ಕಳ ಸಾಹಿತ್ಯಕ್ಕೆ 150 ವರ್ಷಗಳಷ್ಟು ಚಿಕ್ಕದಾದ ಇತಿಹಾಸವಿದೆ. ಇಷ್ಟು ಚಿಕ್ಕ ಅವಧಿಯಲ್ಲಿ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಅಪಾರವಾಗಿ ಬೆಳೆದು ಬಂದಿತು. ಕನ್ನಡ ಚಿಣ್ಣರ ಮನಸ್ಸನ್ನು ತಣಿಸಿತು. ಪ್ರಾರಂಭದಲ್ಲಿ ಮಕ್ಕಳ ಸಾಹಿತ್ಯ ರಚಿಸುವಲ್ಲಿ ಮನಸ್ಸು ಮಾಡಿದ ಚ. ವಾಸುದೇವಯ್ಯ, ಪಂಜೆ ಮಂಗೇಶರಾಯ, ಹೊಯ್ಸಳ, ರೆವರೆಂಡ್ ಎಫ್. ಎಂ. ಕಿಟ್ಟಲ್, ಶಂಭುಲಿಂಗಪ್ಪ ಶಿವರುದ್ರಪ್ಪ ಕುಲಕರ್ಣಿ, ಪಂಡಿತ ಚ. ಎ. ಕವಲಿ, ಡೆಪ್ಯೂಟಿ ಚನ್ನಬಸಪ್ಪ, ವೆಂಕಟೇಶ ರಂಗೋಕಟ್ಟಿ, ಶಿವರಾಮ ಕಾರಂತ, ಜಿ. ಪಿ. ರಾಜರತ್ನಂ, ಬಿ. ಶ್ರೀ, ಪಾಂಡುರಂಗರಾವ್, ಸಿಂಪಿ ಲಿಂಗಣ್ಣ, ಮಿರ್ಜಿ ಅಣ್ಣಾರಾಯ, ಎಂ. ಎನ್. ಕಾಮತ್, ಮೇವುಂಡಿ ಮಲ್ಲಾರಿ, ದಿನಕರ ದೇಸಾಯಿ, 'ಸಿಸು' ಸಂಗಮೇಶ, ಶಂ.ಗು.ಬಿರಾದಾರ ಇವರೆಲ್ಲರೂ ಶಾಲಾ ಶಿಕ್ಷಕರು, ಮಕ್ಕಳಿಗಾಗಿ ಬರೆದವರು. ಕನ್ನಡದಲ್ಲಿ ಮಕ್ಕಳ ಸಾಹಿತ್ಯವೂ ಒಂದು ಇದೆ ಎಂದು ತೋರಿಸಿ ಕೊಟ್ಟು ಮಕ್ಕಳ ಸಾಹಿತ್ಯ ಕ್ಷೇತ್ರವನ್ನೂ ಶ್ರೀಮಂತಗೊಳಿಸಿದವರು.
ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979) ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು. ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ...
READ MORE