`ಜ್ಞಾನ ತುಂಬಿದ ಕೊಡ’ ಎಂ. ಮರಿಯಪ್ಪ ಭಟ್ಟ ಕೃತಿಯು ಶ್ರೀಕೃಷ್ಣಭಟ್ಟ ಅರ್ತಿಕಜೆ ಹಾಗೂ ಜಿ.ಎಸ್. ಭಟ್ಟ ಅವರು ಚೇತನ ಸಾಹಿತ್ಯ ಕಲಾ ಸಾಧಕರ ಮಾಲೆಯಡಿ ರಚಿಸಿದ ವ್ಯಕ್ತಿಚಿತ್ರಣ ಸಂಕಲನವಾಗಿದೆ. ಇಲ್ಲಿ ಇಂದು ಕನ್ನಡಿಗರು ಬಹುತೇಕವಾಗಿ ಮರೆತಿರುವ ಡಾ. ಮರಿಯಪ್ಪ ಭಟ್ಟರನ್ನು ಪರಿಚಯಿಸಲಾಗಿದೆ. ಕನ್ನಡ ನುಡಿಯತ್ತ ಡಾ. ಮರಿಯಪ್ಪ ಭಟ್ಟರ ಕೆಲಸಗಳನ್ನು ತಿಳಿದಲ್ಲಿ ಎಂತಹ ದೊಡ್ಡ ಸಾಧನೆಗೈದು ಎಲೆ ಮರೆ ಕಾಯಿಯಂತೆಯೇ ಬದುಕಿದ ಮಹಾನ್ ವ್ಯಕ್ತಿ ಅನ್ನಿಸಬಹುದು. ಹೀಗೆ ಇಂತಹ ಹಲವಾರು ವಿಚಾರಗಳನ್ನು ಈ ಕೃತಿಯು ಕಟ್ಟಿಕೊಡುತ್ತದೆ.
ಲೇಖಕ, ಕಲಾವಿದ ಶ್ರೀಕೃಷ್ಣಭಟ್ ಅರ್ತಿಕಜೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಡುವನ್ನೂರು ಅರ್ತಿಕಜೆಯಲ್ಲಿ ಜನಿಸಿದರು. ತಂದೆ ಶ್ಯಾಮಭಟ್, ತಾಯಿ ಸಾವಿತ್ರಿ ಅಮ್ಮ. 1969ರಲ್ಲಿ ಬಿ.ಎ. ಪದವಿ(ಕಾಸರಗೋಡು ಸರಕಾರಿ ಕಾಲೇಜು), 1971ರಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್ ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಪಡೆದರು. ಮದರಾಸು ವಿಶ್ವವಿದ್ಯಾಲಯದಲ್ಲಿ “ಕನ್ನಡದಲ್ಲಿ ಶಾಸನ ಸಾಹಿತ್ಯ” ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು. ನಂತರ ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ, ರೀಡರ್, ಪ್ರಾಧ್ಯಾಪಕ, ಮುಖ್ಯಸ್ಥರಾದರು. ‘ಸೂತಭಾರತ, ಸಹಸ್ರಾರ್ಧ ತುಳು ಗಾದೆಗಳು, ಹವ್ಯಕ ಗಾದೆಗಳು, ಜನಪ್ರಿಯ ...
READ MORE