ನಾಲ್ಕನೇ ತಲೆಮಾರಿನ ಜಾನಪದ ವಿದ್ವಾಂಸರನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ. ಜಾನಪದ ತಲೆಮಾರು ಕೃತಿಯು ನಾಲ್ಕು ಭಾಗಗಳಾಗಿ ಹೊರಹೊಮ್ಮಿದ್ದು ಇದು ನಾಲ್ಕನೇ ಭಾಗವಾಗಿದೆ. ಇದರಲ್ಲಿ ಪಂಡಿತ ಸ್ವಾಮಿಗೌಡ, ಎಲ್.ಜಿ. ಸುಮಿತ್ರ, ಕೆರೆಮನೆ ಶಂಭು ಹೆಗಡೆ, ಗುಂಡ್ಮಿ ಚಂದ್ರಶೇಖರ ಐತಾಳ್, ನಂ. ನಾರಾಯಣಗೌಡ, ಡಿ.ಕೆ. ಈರೇಗೌಡ, ಶಾಂತಿನಾಯಕ, ಸಂಗಮೇಶ ಸವದತ್ತಿ ಮಠ, ಜೆ.ಎಸ್. ಭಟ್ಟ, ಬಿ.ಎ. ವಿವೇಕ ರೈ, ಜಿ.ಎಸ್. ಭಟ್ಟ, ಡಿ. ಬೋರೋಗೌಡ ಬಳದರೆ, ಬನ್ನಂಜೆ ಬಾಬು ಅಮೀನ್, ಪಾಲ್ತಾಡಿ ರಾಮಕೃಷ್ಣ ಆಚಾರ್, ಮಳಲಿ ವಸಂತ ಕುಮಾರ್, ಗವೀಶ್ ಹಿರೇಮಠ, ಹೊರೆಯಾಲ ದೊರೆಸ್ವಾಮಿ, ಟಿ.ಎಸ್. ಸತ್ಯಾನಾಥ ಮುಂತಾದವರನ್ನು ಪರಿಚಯಿಸಲಾಗಿದೆ.
ಲೇಖಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಂಪನಹಳ್ಳಿಯವರು ಅಧ್ಯಾಪನ, ಜಾನಪದ ಅಧ್ಯಯನ, ಸಂಘಟನೆ ಮತ್ತು ಸಂವರ್ಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಬರಹಗಳಿಗೆ ಗಟ್ಟಿನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಬರವಣಿಗೆಯ ಭದ್ರತೆಗೆ ಮೊದಲು ಗುರುತಿಸಿಕೊಂಡಿರುವುದು ಸತ್ವಶಾಲಿಯಾದ ಜನಪದ ಭೂಮಿ ಹಾಸನದೊಳಗೆ ಇರುತ್ತ ಅದನ್ನೊಂದು ಸಾಂಸ್ಕೃತಿಕ ಅನನ್ಯತೆಯಾಗಿ ನೋಡುವ ಮೂಲಕ ಅದರೊಳಗೆ ಅಡಗಿರುವ ಎಲ್ಲಾ ಜೀವನ ಶ್ರದ್ದೆಗಳನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಅವರಿಗೆ ಮಾನವ ಶಾಸ್ತ್ರಜ್ಞನ ಹುಡುಕಾಟದ ಆಸಕ್ತಿಯೂ ಇದೆ. ಜಾನಪದ ವಿದ್ವಾಂಸನ ಕ್ರಿಯಾಶೀಲ ಮನೋಧರ್ಮವೂ ಇದೆ. ಹೀಗಾಗಿ ಅವರ ಜೀವನ ಹುಟುಕಾಟಕ್ಕೆ ಮೌಲಿಕತೆ ಇದೆ. ...
READ MORE