ಡಾ.ಸಿ.ಕೆ. ನಾವಲಗಿ ಹಾಗೂ ಪ್ರೊ. ಚಂದ್ರಶೇಖರ ಅಕ್ಕಿ ಅವರು ಸಂಪಾದಿಸಿರುವ ಕೃತಿ -ಗೋಕಾವಿ ನಾಡಿ ಹೊನ್ನಬೆಳೆ. ಗೋಕಾಕ ತಾಲ್ಲೂಕಿನ ಸಾಹಿತ್ಯ ಸಮೀಕ್ಷೆ, ಕನ್ನಡದ ಕುಂದಣ: ಪ್ರೊ.ಕೆ.ಜಿ. ಕುಂದಣಗಾರ, ಡಾ.ಎಸ್.ಸಿ. ನಂದೀಮಠ: ಬದುಕು-ಬರೆಹ, ಶಿಕ್ಷಣ ತಜ್ಞ ಡಾ.ಡಿ.ಸಿ. ಪಾವಟೆ, ಸಂಸ್ಕೃತಿ-ಅನ್ವೇಷಕ: ಆನಂದಕಂದ, ಕತ್ತಿಮೊನೆ: ಕಟ್ಟೀಮನಿ, ಕಾದಂಬರಿಶ್ರೀ ಕೃಷ್ಣಮೂರ್ತಿ ಪುರಾಣಿಕ, ಜಾನಪದದ ಚೆಲುವ ಡಾ. ಚಂದ್ರಶೇಖರ ಕಂಬಾರ, ಶ್ರೀ ಕೃಷ್ಣ ಪಾರಿಜಾತದ ಕುಲಗೋಡ ತಮ್ಮಣ್ಣ, ಪ್ರಥಮ ರಂಗನಟಿ: ಕೌಜಲಗಿ ನಿಂಗವ್ವ, ಬಣ್ಣಕ್ಕೆ ಜೀವ ತುಂಬುವ ಭೀಮರಾವ ಮುರಗೋಡ ಮುಂತಾದವರ ಕುರಿತು ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...
READ MORE