ಖ್ಯಾತ ಸಾಹಿತಿ ಸಾದತ್ ಹಸನ್ ಮಾಂಟೊ ಅವರು ದೇಶದ ವಿಭಜನೆಯ ಸಂಧರ್ಭದಲ್ಲಿ ಜರ್ಜರಿತನಾದ ಮನುಷ್ಯ ಎದುರಿಸಿದ ಮಾನಸಿಕ ಸಮಸ್ಯಗಳನ್ನು ವಿವರಿಸುವ ಕಥೆಗಳ ಕನ್ನಡ ಅನುವಾದ. 'ಸದ್ಯಕ್ಕಿದು ಹುಚ್ಚರ ಸಂತಿ’ ಕೃತಿಯಲ್ಲಿ 196 ಕಥೆಗಳಿದ್ದು, ಪಾಕಿಸ್ತಾನದ ವಿಭಜನೆಯಾಗಿ ಆರು ದಶಕಗಳು ಸಂದಿದ್ದರೂ ಆ ದಿನಗಳಲ್ಲಿ ನಡೆದ ಮನ ಕಲಕಿದ ಘಟನೆಗಳ ಭಾವ ತೀವ್ರತೆ ಇನ್ನೂ ಆರದೆ. ಮತಾಂಧತೆಯ ಮಾನವಿಯತೆಗೆ ಹೇತುವಾದ ಘಟನೆಯನ್ನು ಇಲ್ಲಿ ವಿವರಿಸಲಾಗಿದೆ. ಸೌಹಾರ್ದಯುತವಾದ ವಾತಾವರಣವನ್ನು ಕಲುಷಿತಗೊಳಿಸಿ ಮಾನವೀಯ ಸಂಬಂಧಗಳನ್ನು ರಾಜಕಾರಣ ಮತ್ತು ಮತಧರ್ಮಗಳು ಭಗ್ನಗೊಳಿಸುವ ಬಗೆಯನ್ನು ಮಾಂಟೋ ಕತೆಗಳು ಮನಸ್ಸಿಗೆ ತಟ್ಟುವ ರೀತಿಯಲ್ಲಿ ವಿವರಿಸುತ್ತದೆ.
ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...
READ MORE