ಷಿಗೆ ನಯೋಯ, ಅಕುಟಗಾವಾ ರೈಯು ನೊಸುಕೆ, ಕವಾಬಾಟ ಯಸುನಾರಿ, ಹೆಸೆಲಿಯಾಂಗ್ ಮೊದಲಾದ ಮತ್ತು ಅಜ್ಞಾತ ಕರ್ತೃವೊಬ್ಬರ ಎಂಟು ಕಥೆಗಳನ್ನು ಗಾಂಧೀವಾದಿ ನೀಲತ್ತಹಳ್ಳಿ ಕಸ್ತೂರಿ ಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರಳವಾದ ರೀತಿ, ಮನೋಜ್ಞವಾದ ಸನ್ನಿವೇಶಗಳು, ಸಂಸಾರದಲ್ಲಿ ಬರುವ ಅಪನಂಬಿಕೆಗಳು, ಸ್ತ್ರೀಯ ಮನೋ ವಿಶ್ಲೇಷಣೆಯ ಪಾಂಡಿತ್ಯ, ವಿಧವೆಯೊಬ್ಬಳು ಸೇವಕನನ್ನು ಪ್ರೇಮಿಸಿ, ಗೌರವವನ್ನು ಕಳೆದುಕೊಂಡು ನೇಣುಹಾಕಿಕೊಡ ಪ್ರಕರಣ ಇಂತಹ ಪ್ರಮುಖ ಸಂಗತಿಗಳನ್ನು ನೀಲತ್ತಹಳ್ಳಿ ಕಸ್ತೂರಿ ಯವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...
READ MORE