ಭಾರತೀಯ ಭಾಷೆಗಳಲ್ಲಿಯೇ ಇಂಥ ಆಯಾಮದ ಕಥಾಸಾಹಿತ್ಯದ ಸಮಗ್ರ ನೋಟವನ್ನು ನೀಡ ಬಲ್ಲಂತಹ ಇನ್ನೊಂದು ಗ್ರಂಥ ಬಂದಿಲ್ಲವೆಂಬ ಹೆಗ್ಗಳಿಕೆಗೆ ಈ ಕೃತಿಯೂ ಪಾತ್ರವಾಗಿದೆ. ಶ್ರೀಕಮಲೇಶ್ವರ್ ಅವರು ತಮ್ಮ ಮಿತ್ರರ ಸಹಾಯದೊಂದಿಗೆ ಈ ಕೃತಿಯನ್ನು ಸಂಪಾದಿಸಿದರು. ಆರ್. ಪಿ. ಹೆಗಡೆಯವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಸಂಪುಟವು ಮೂಲಕೃತಿಯ ಆರು ಖಂಡಗಳನ್ನು ಹಾಗೂ ಇವುಗಳಲ್ಲಿ ಕ್ರಮವಾಗಿ ನೈತಿಕ ಕಥೆಗಳು, ಕಥಾಸರಿತ್ಸಾಗರದ ಕಥೆಗಳು, ಬುದ್ಧನ ಮತ್ತು ಜಾತಕದ ಕಥೆಗಳು, ಜೈನಾಗಮದ ಕಥೆಗಳು, ಪಂಚತಂತ್ರ ಹಾಗೂ ಹಿತೋಪದೇಶದ ಕಥೆಗಳು ಮತ್ತು ಉಪನಿಷತ್ತಿನ ಕಥೆಗಳನ್ನು ಈ ಸಂಪುಟವು ಒಳಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...
READ MORE