ಭಾರತೀಯ ಭಾಷೆಗಳಲ್ಲಿಯೇ ಇಂಥ ಆಯಾಮದ ಕಥಾಸಾಹಿತ್ಯದ ಸಮಗ್ರ ನೋಟವನ್ನು ನೀಡಬಲ್ಲಂತಹ ಬೇರೊಂದು ಗ್ರಂಥ ಬಂದಿಲ್ಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೃತಿ ಇದು. ಈ ಕೃತಿಯನ್ನು ಶ್ರೀಕಮಲೇಶ್ವರ್ ಅವರು ತಮ್ಮ ಮಿತ್ರರ ಸಹಾಯದೊಂದಿಗೆ ಸಂಪಾದಿಸಿದರು. ಆರ್. ಪಿ. ಹೆಗಡೆಯವರು ಇದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಗ್ರೀಕ್, ಭಾರತೀಯ ಕಥಾಪರಂಪರೆ ಹಾಗೂ ಭೂಮಿಕೆಗಳನ್ನು ಮತ್ತು ಆಧುನಿಕ ಕತೆಗಳ ರಚನಾ ಸಂಸ್ಕೃತಿಯನ್ನು ವಿಸ್ತಾರವಾಗಿ ಮೊದಲ ಸಂಪುಟದಲ್ಲಿ ನೀಡಿದ್ದಾರೆ. ಭಾರತದ ಪರಂಪರೆಯಲ್ಲಿ ಬಂದಿರುವ ಪೌರಾಣಿಕ ಕಥೆಗಳನ್ನು ಹಾಗು ವಿದೇಶೀ ಪೌರಾಣಿಕ ಕಥೆಗಳನ್ನು ಕೂಡ ಈ ಸಂಪುಟದಲ್ಲಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...
READ MORE