ಹಿರಿಯ ಲೇಖಕ -ಪತ್ರಕರ್ತ ಜಿ. ಎನ್. ರಂಗನಾಥ ರಾವ್ ಅವರ ‘ಕಾಫ್ಕಾ ಕಥೆಗಳು’ ಅನುವಾದಿತ ಕೃತಿ. ಕೃತಿಗೆ ಬೆನ್ನುಡಿ ಬರೆದಿರುವ ಎಸ್. ದಿವಾಕರ್ ಅವರು, ಕಾಫ್ಕಾನ ಕೃತಿಗಳನ್ನು ಅನುವಾದಿಸುವುದು ಸುಲಭದ ಕೆಲಸವಲ್ಲ. ಕಾವ್ಯದಲ್ಲಿ ಹೇಗೋ ಹಾಗೆ ಅವನು ಶಬ್ಧಗಳನ್ನು ಅವುಗಳ ಸಮಗ್ರಾರ್ಥದಲ್ಲಿ ಬಳಸಿರುವುದರಿಂದ, ಅದನ್ನು ಬೇರೊಂದು ಭಾಷೆಯಲ್ಲಿ ಅಷ್ಟೇ ಖಚಿತವಾಗಿ ಹಿಡಿಯುವುದೂ ಒಂದು ಸವಾಲು. ಜಿ.ಎನ್. ರಂಗನಾಥ ರಾವ್ ಅವರ ಇಲ್ಲಿನ ಕತೆಗಳನ್ನು ಓದಿದರೆ, ಕಾಫ್ಕಾನ ತಿರುಳನ್ನು ಗ್ರಹಿಸಬಲ್ಲ ಅವರ ಪ್ರತಿಭೆಯ ಬಗೆಗೆ ಆಶ್ಚರ್ಯವುಂಟಾಗುತ್ತದೆ. ಇವು ಕನ್ನಡದ್ದೇ ಆದ ಕತೆಗಳ ಸಂಗ್ರಹವೋ ಎನ್ನುವಷ್ಟು ಮಟ್ಟಿಗೆ ಅವರ ಅನುವಾದಗಳು ಸಹಜವಾಗಿವೆ. ಮೂಲಕ್ಕೆ ಎಲ್ಲಿಯೂ ಕುಂದಾಗದಂತೆ, ಕಾಫ್ಕಾನ ವಿಚಾರ ಪ್ರಣಾಲಿಯ ಜೊತೆಯಲ್ಲೇ ಸಾಗಿ, ಭಾಷೆಗಳು ಬೇರೆಬೇರೆಯಾದರೂ ಕಾಫ್ಕಾ ಮತ್ತು ಅನುವಾದಕ ಇವರಿಬ್ಬರ ಮನೋಧರ್ಮಗಳು ಒಂದೇ ಎನ್ನಿಸುವಂತೆ ಅವರು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ' ಎಂದಿದ್ದಾರೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE