ಕುರ್‍ರತುಲ ಐನ ಹೈದರ ಅವರ ಆಯ್ದ ಕತೆಗಳು

Author : ಪಂಚಾಕ್ಷರಿ ಹಿರೇಮಠ

Pages 285

₹ 85.00




Year of Publication: 2001
Published by: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ
Address: # ಎ-5, ಗ್ರೀನ್ ಪಾರ್ಕ್, ನವದೆಹಲಿ-110016

Synopsys

ಕುರ್‍ರತುಲ ಐನ್ ಹೈದರ್ ಕಿ ಮುಂತಕ್ಹಾಬ್ ಕಹಾನಿಯಾ-ಮೂಲ ಶೀರ್ಷಿಕೆಯ ಉರ್ದು ಕೃತಿ ಕುರ್‍ರತುಲ ಐನ ಹೈದರ್ ಅವರ ಆಯ್ದ ಕಥೆಗಳು. ಈ ಕೃತಿಯನ್ನು ಡಾ. ಪಂಚಾಕ್ಷರಿ ಹಿರೇಮಠ ಕನ್ನಡಕ್ಕೆ ಅನುವಾದಿಸಿದ್ದಾರೆ. ಕುರ್‍ರತುಲ ಐನ ಹೈದರ್ ಎಂಬುವರು ಮೂಲ ಕಥೆಗಾರರು. ನಿರ್ಲಿಪ್ತ, ಕಾರಮಾನ್, ಹಾಜಿ ಗುಲಬಾಬಾ ಬೇಕತಾಶಿಯಾ ಪ್ರವಚನ, ಜಾರ್ಜಿಯಾದ ಸೇಂಟ್ ಫ್ಲೋರಾಳ ಆತ್ಮ ಸ್ವೀಕೃತಿ, ಪುನರ್ಜನ್ಮವಾದಲ್ಲಿ ಹೆಣ್ಣಾಗಿಸಬೇಡ ಹೀಗೆ ಒಟ್ಟು 12 ಕಥೆಗಳು ಸಂಕಲನದಲ್ಲಿವೆ.

About the Author

ಪಂಚಾಕ್ಷರಿ ಹಿರೇಮಠ
(06 January 1933 - 14 March 2025)

ಪಂಚಾಕ್ಷರಿ ಹಿರೇಮಠ ಅವರು 1933ರ ಜನವರಿ 6 ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದರು. ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. 2 ವರ್ಷದವರಿದ್ದಾಗ ಪಂಚಾಕ್ಷರಿ ತಮ್ಮ ತಂದೆಯನ್ನು ಕಳೆದುಕೊಂಡರು.  ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ  ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು. ಅವರು ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ...

READ MORE

Related Books