ಲೇಖಕ ಅಲೋಕ್ ಭಲ್ಲಾ ಅವರು 1993 ರಲ್ಲಿ ಸಂಕಲಿಸಿದ್ದ 46 ಕತೆಗಾರರ ಬೃಹತ್ ಸಂಪುಟವು ಆರ್.ಕೆ. ಹುಡಗಿ (ರಾಹು) ಅವರಿಂದ ಅನುವಾದಿತಗೊಂಡು ಕನ್ನಡದಲ್ಲಿ ಧರೆಹೊತ್ತಿ ಉರಿದಾಗ ಎಂಬ ಹೆಸರಿನ ಮೂರು ಭಾಗಗಳಲ್ಲಿ ಪ್ರಕಟಗೊಂಡಿದೆ.
ಭಾರತದ ವಿಭಜನೆಯ ದುರಂತ ಕಥೆಗಳನ್ನಾಧರಿಸಿದ ಕೆಲವು ಕಥಾನಕಗಳು ಗಲಭೆಯ ಕ್ರೌರ್ಯ, ಕೇಳಿಸಿಕೊಂಡ ಆರ್ತ ಚೀತ್ಕಾರಗಳು, ಕಾಲ ಮತ್ತು ದೇಶದ ಚರಿತ್ರೆಯ ಸಂದರ್ಭದಲ್ಲಿನ ಘಟನೆಗಳು ಇಲ್ಲಿನ ಅನೇಕರ ಬರಹಗಳಲ್ಲಿ ಎದ್ದುಕಾಣುವ ಅಂಶಗಳು.
ತೋಬಾ ಟೇಕ್ ಸಿಂಗ್, ಆಖರಿ ಸಲಾಮ್, ಕಲ್ ಸುಮ್, ಜಟಾಯು, ಆಹುತಿ, ಸಾವು, ಪೋಸ್ಟ್ ಬಾಕ್ಸ್, ಪೇಶಾವರ್ ಎಕ್ಸ್ ಪ್ರೆಸ್, ನೀರು ಕುಡಿಸಿ, ರಕ್ತ ಕಕ್ಕಿಸಿದ, ಸಂತ್ರಸ್ತರ ಕನಸು, ಸಾವಿಲ್ಲದ ಸ್ಮೃತಿಗಳು, ಕೂಲಿ ಮುಂತಾದ ಅನೇಕ ಘಟನೆಗಳನ್ನಾಧರಿಸಿದ ಈ ಕಥಾನಕಗಳು ಈ ಪುಸ್ತಕದಲ್ಲಿ ಇವೆ.
ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು . ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ...
READ MORE