ವಿಶ್ವಕಥಾಕೋಶದ 11ನೇ ಸಂಪುಟದಲ್ಲಿ ಜೆಕೊಸ್ಲಾವಾಕಿಯಾ, ಪೊಲೆಂಡ್ ದೇಶದ ಕತೆಗಳಿವೆ. ನೆತ್ತರು ದೆವ್ವ -ಯಾನ್ ನೆರುದಾ, ಫೋಲ್ಟಿನನ ಡಮರು- ಸ್ವತೋಪಲುಕ್ ಚೇಖ್, ಮಹಾಯುದ್ಧದಲ್ಲಿ ಶ್ವೀಕ್ನ ಮಧ್ಯಪ್ರವೇಶ-ಯಾರೊಸ್ಲಾವ್ ಹಾಶೆಕ್, ಉಪವಾಸ ಕಲಾಕಾರ -ಫ್ರಾನ್ಜ್ ಕಾಫ್ಕ, ಆರ್ಕಿಮಿಡೀಸನ ಮರಣ -ಕಾರೆಲ್ ಚಾಪೆಕ್, ನೀರವ ತಡೆಗಟ್ಟೆ -ಯಾನ್ ದರದಾ, ಆರು ಹುಡುಗರ ಕಥೆ -ಜೂಲಿಯಸ್ ಫೂಚಿಕ್, ಕೊಳೆಯ ಹೊಲ -ಪಾವೆಲ್ ಫ್ರಾಂತ್ಸೌಜ್, ಒಂದು ಚಿಟಿಕೆ ಉಪ್ಪು -ಆಡಮ್ ಸೈಮನ್ಸ್ಕಿ ಆಸ್ಟಿನ್ವಾಲ್, ದೀಪಸ್ತಂಭದ ಕಾವಲುಗಾರ -ಹೆನ್ರಿಕ್ ಸಿಯೆಂಕಿವಿಚ್, ಅವಳ ಮುದ್ದುಮರಿ -ಗ್ಯಾಬ್ರಿಯೆಲಾ ಜಪೋಲ್ಸ್ಕಾ, ಮಾನವ ತಂತಿ -ಬೊಲಿಸ್ಲಾವ್ ಪ್ರೂಶ್, ರೈಲು ರಸ್ತೆಯ ಬದಿಯಲ್ಲಿ -ಜೋಫಿಯಾ ನಲ್ಕೋವ್ಶ್ಕಾ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE