ವಿಶ್ವಕಥಾಕೋಶದ 14ನೇ ಸಂಪುಟದಲ್ಲಿ ಐಸ್ಲ್ಯಾಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡಜ್, ಫಿನ್ಲೆಂಡ್ ಕತೆಗಳಿವೆ. ಸಜ್ಜನನ ಸಾವು -ಸ್ನೋರಿ ಸ್ಪುರ್ಲ್ಸೋನ್ ಬಲೆಜೆಸ್ತರು -ಮೋಲ್ಡಿ ಬುಲ್ಬುಲ್ ಹಕ್ಕಿ -ಹಾನ್ಸ್ ಕ್ರಿಶ್ಚಿಯನ್ ಆ೦ಡರ್ಸನ್ ಎರಡು ಪ್ರಪಂಚಗಳು -ಯೇನ್ಸ್ ಪೇಟರ್ ಯಾಕಬ್ಸನ್ ಹಾದಿಯ ಹಕ್ಕಿಗಳು -ಮಾರ್ಟಿನ್ ಆಂಡರ್ಸನ್ ನೆಕ್ಸೊ ತಂದೆ -ಬ್ಯೋರ್ನ್ಸ್ಟ್ಯೆರ್ನ್ ಬ್ಯೋರ್ನ್ಸೋನ್ ರಕ್ಕಸ ಮೀನು -ಯೋಹಾನ್ ಬೋಯೆರ್ ಪ್ರೇಮ ಮತ್ತು ರೊಟ್ಟಿ -ಆಗಸ್ಟ್ ಸ್ಟ್ರೈಂಡ್ಬರ್ಗ್ ನಿದ್ದೆಯಲ್ಲಿ ಕಣ್ಣೀರು -ಪೇಡರ್ ಷೋರ್ಗೆನ್ ವಿಚಿತ್ರ ಪ್ರವಾಸಿ -ಪೇರ್ ಓಲಾಫ್ ಸುಂಡ್ಮಾನ್ ಪರಿಶುದ್ಧ ಮಾನವಕುಲ -ಮಾರ್ತ್ತಿ ಲಾರ್ನಿ ಕ್ಷಣಗಳು -ಫಾವೊ ಪೋಸ್ಸಿ
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE