ಕವಿ ಚಂದ್ರಶೇಖರ ಆಲೂರು ಅವರ ’ಹೀಗೊಂದು ದಾಂಪತ್ಯಗೀತೆ’ ಕೃತಿಯು ಆಂಟನ್ ಚೆಕಾವ್ ನ ಕಿರು ಕಾದಂಬರಿ ಮತ್ತು ಕೆಲಕತೆಗಳಾಗಿದೆ. ‘ಈ ಕೃತಿಯಲ್ಲಿ ಅನುವಾದದ ವ್ಯಾಕರಣವನ್ನು ಅಷ್ಟಾಗಿ ಪಾಲಿಸದೆ, ಮೂಲಕೃತಿಯ ಹೃದಯದ ಮಿಡಿತವನ್ನು ಹಿಡಿದಿರಲು ಯತ್ನಿಸಿದ ಫಲ ಇಲ್ಲಿದೆ. ಚೆಕಾವ್ ನ ಕೆಲವು ಕತೆಗಳು ಮತ್ತು ’ದ ತ್ರೀ ಇಯರ್ಸ್’ ಎಂಬ ಕಿರು ಕಾದಂಬರಿಯನ್ನು ಈ ಕೃತಿಯು ಒಳಗೊಂಡಿದೆ. 21ನೇ ಶತಮಾನದ ಭಾರತಕ್ಕೆ, ಕರ್ನಾಟಕಕ್ಕೆ ಇಂದೂ ಪ್ರಸ್ತುತ ಎನಿಸುವ ಚೆಕಾವ್ ನ ಕತೆಗಳು ನನ್ನಲ್ಲಿ ಸದಾ ಕುತೂಹಲಭರಿತ ಅಕ್ಕರೆಯನ್ನು ಹುಟ್ಟಿಸಿವೆ. ’ದ ತ್ರೀ ಇಯರ್ಸ್’ ಆಗಲಿ, ಆತನ ಇತರ ಕತೆಗಳಾಗಲಿ ಕನ್ನಡದ ಅತ್ಯತ್ತಮ ಕತೆಗಾರನೊಬ್ಬ ಬರೆದ ಕತೆಗಳಂತೆಯೇ ಕಾಣುತ್ತವೆ. ಈ ಪ್ರಸ್ತುತತೆಯೇ ಈ ಕೃತಿಯ ಹುಟ್ಟಿಗೆ ಕಾರಣವಾಗಿದೆ’ ಎಂದು ಅನುವಾದಕರು ಹೇಳಿಕೊಂಡಿದ್ದಾರೆ.
ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು. ತಂದೆ ಶ್ರೀ ಎ.ಎಚ್.ಲಿಂಗಯ್ಯ, ತಾಯಿ ಶ್ರೀಮತಿ ಅಂಕಮ್ಮ. ಏಳು ಸಹೋದರಿಯರು. ತಂದೆ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರಿಂದ ರಾಜ್ಯದ ವಿವಿಧ ಕಡೆ ವಿದ್ಯಾಭ್ಯಾಸ. 1980 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. 1981 ರಿಂದ 1990 ರವರೆಗೆ 'ಲಂಕೇಶ್ ಪತ್ರಿಕೆ'ಯಲ್ಲಿ; 1994 ರಿಂದ 1996ರ ವರೆಗೆ 'ಈ ವಾರ ಕರ್ನಾಟಕ'ದಲ್ಲಿ ವರದಿ, ಸಿನಿಮಾ ಅಂಕಣ, ಪ್ರಬಂಧ, ಕಥೆ, ವಿಮರ್ಶೆ ಇತ್ಯಾದಿ ಪ್ರಕಟ. 2000 ಜುಲೈನಿಂದ 'ಹಾಯ್ ಬೆಂಗಳೂರ್!' ಪತ್ರಿಕೆಯಲ್ಲಿ ಪ್ರತಿವಾರ “ಒಲಿದಂತೆ ಹಾಡುವೆ' ಅಂಕಣ. 2000ದಲ್ಲಿ ಅಮೆರಿಕಾ ...
READ MORE