ವಿಶ್ವಕಥಾಕೋಶದ 13ನೇ ಸಂಪುಟದಲ್ಲಿ ಅಮೆರಿಕಾ, ಮೆಕ್ಸಿಕೋ ಮತ್ತು ಕೆನಡಾ ದೇಶದ ಕತೆಗಳಿವೆ. ಅದೃಷ್ಟ -ಮಾರ್ಕ್ ಟ್ವೇನ್, ಕತೆ ಹೇಳಿದ ಹೃದಯ -ಎಡ್ಗರ್ ಆಲನ್ ಪೊ, ಜೀವನ ನಿಯಮ -ಜಾಕ್ ಲಂಡನ್, ಕೊನೆಯ ಎಲೆ -ಒ. ಹೆನ್ರಿ, ಬಿರುಗಾಳಿ ಬೀಸಿದ ಮೇಲೆ -ಅರ್ನೆಸ್ಟ್ ಹೆಮಿಂಗ್ವೇ, ಆ ಕ್ಷೌರಿಕ ಹಾಗೂ ಸರ್ಕಸಿನ ಹುಲಿಯ ಬಾಯಿಗೆ ತಲೆಕೊಟ್ಟ ಆತನ ಚಿಕ್ಕಪ್ಪ -ವಿಲಿಯಮ್ ಸಾರೊಯನ್, ದಾರಿಯಲ್ಲಿ ಕಂಡವನು -ಆಲ್ಬರ್ಟ್ ಮಾಲ್ಟ್ಸ್, ವಸಂತ ನಿನಗೆ ನಮನ -ಮೆರಿದೆಲ್ ಲ ಸೂಅ, ಕಣ್ಮರೆಯಾದ ಫೀಬೀ -ಥಿಯೊಡೊರ್ ಡ್ರೈಸರ್, ಇನ್ನೇನು ಗಂಡಸಾಗಲಿದ್ದ ಒಬ್ಬ ಗಂಡಸು -ರಿಚರ್ಡ್ ರೈಟ್, ವರದಿ -ಡೊನಾಲ್ಡ್ ಬಾರ್ಥೆಲ್ಮೆ, ಮುರಿದುಹೋದ ಭೂಮಂಡಲ -ಹೆನ್ರಿ ಕ್ರೇಸೆಲ್, ಹದಿಮೂರನೆಯ ತೋಳ -ಆರ್ತುರೊ ಸೌತೋ ಅಲಬಾರ್ಸೆ
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE