ಖ್ಯಾತ ತಮಿಳು ಲೇಖಕರಾದ ಟಿ.ಜಾನಕಿರಾಮನ್ ಅವರ 17 ಸಣ್ಣ ಕತೆಗಳ ಕನ್ನಡಾನುವಾದ. ಆಯ್ಕೆ ಮತ್ತು ಅನುವಾದ ಕೆ ನಲ್ಲತಂಬಿ ಅವರದು. ಈ ಪುಸ್ತಕಕ್ಕೆ ಕಥೆಗಾರ ಬೊಳುವಾರು ಮಹಮದ್ ಕುಂಞ ಬೆನ್ನುಡಿ ಬರೆದಿದ್ದಾರೆ. ಅಷ್ಟಿಷ್ಟನ್ನಾದರೂ ಓದಿಕೊಂಡಿರುವ ನಾವು, ಮಹಾತ್ಮ ಗಾಂಧಿ ಮಾರ್ಗದಲ್ಲಿ ನಡೆಯದೆ, ಕ್ರಾಸ್ ರೋಡ್ಗಳಲ್ಲಿಯೇ ಬಚ್ಚಿಟ್ಟುಕೊಂಡಿದ್ದೇವೆ. ಯಾಕೆಂದರೆ ನಾವು ಪುಕ್ಕಲರು. ಎಂದು ಬೆನ್ನುಡಿಯಲ್ಲಿ ಬರೆಯುವ ಅವರು, ಗಾಂಧಿಗಿದ್ದ ಧೈರ್ಯದಲ್ಲಿ ಒಂದಿಷ್ಟಾದರೂ ಹೊಂದಬೇಕೆನ್ನುವವರು, ಹೃದಯವಂತ ಕತೆಗಾರ ನಲ್ಲತಂಬಿ ಅವರು ಅನುವಾದಿಸಿರುವ, ತಮಿಳಿನ ಸುಪ್ರಸಿದ್ಧ ಸಾಹಿತಿ ದೇವಿಭಾರತಿ ಅವರ ಅದ್ಭುತ ಕತೆ ‘ಮತ್ತೊಂದು ರಾತ್ರಿ’ಯನ್ನು ದಿನಕ್ಕೊಮ್ಮೆಯಾದರೂ ಓದುವುದು ಒಳ್ಳೆಯದು ಎಂದಿದ್ದಾರೆ.
ಮನೆ ಭಾಷೆ ತಮಿಳಾಗಿದ್ದರೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತಮ್ಮದೇ ಅಸ್ತಿತ್ವ ಕಂಡುಕೊಂಡಿರುವ ಲೇಖಕ ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ‘ಅರ್ಧನಾರೀಶ್ವರ’, ‘ಹುಣಿಸೆಮರದ ಕಥೆ’, ‘ಹಳ್ಳ ಬಂತು ಹಳ್ಳ’, ಗುಡಿಗಂಟೆ ಮತ್ತು ಇತರ ಕಥೆಗಳು, ಬಾಪೂ ಹೆಜ್ಜೆಗಳಲ್ಲಿ, ಮತ್ತೊಂದು ರಾತ್ರಿ, ಅತ್ತರ್, ಸರಸವಾಣಿಯ ಗಿಣಿಗಳು, ಕೋಶಿ’ಸ್ ಕವಿತೆಗಳು, ಹತ್ತು ತಮಿಳು ಕತೆಗಳು, ಗೂಳಿ, ಹೂ ಕೊಂಡ, ಪೊನಾಚ್ಚಿ, ಅವರ ಅತ್ಯಂತ ಗಮನಾರ್ಹ ಕೃತಿಗಳು. ...
READ MORE