`ಆಲದ ಮರದ ಕೆಳಗೆ ಮತ್ತು ಇತರ ಕಥೆಗಳು` ಖ್ಯಾತ ಬರಹಗಾರ ಆರ್.ಕೆ. ನಾರಾಯಣ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಲೇಖಕ ಹೆಚ್ . ರಾಮಚಂದ್ರಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ ಕಥೆಗಳ ಸಂಕಲನವಿದು. ಒಟ್ಟು 28 ಕಥೆಗಳಿವೆ. ಪ್ರತಿ ಕಥೆಯು ಐದಾರು ಪುಟಗಳಿಗಿಂತ ಹೆಚ್ಚಿಲ್ಲ. ಆದರೆ, ಗ್ರಾಮೀಣ ಬದುಕನ್ನು ಪೂರ್ಣವಾಗಿ ಕಟ್ಟಿಕೊಡುವ ಸಾಮರ್ಥ್ಯವನ್ನು ಹೊಂದಿವೆ. ಸಾಮಾಜಿಕ ನ್ಯಾಯ-ಅನ್ಯಾಯಗಳ, ದೇಸಿ ಜನಸಂಸ್ಕೃತಿಯ ಸ್ಪಷ್ಟ ಚಿತ್ರಣ ನೀಡುತ್ತವೆ. ಈ ಕಥೆಗಳಲ್ಲಿ ಹಾಸ್ಯವೂ, ವ್ಯಂಗ್ಯವೂ ಇದೆ.
ಡಾ. ಹೆಚ್. ರಾಮಚಂದ್ರ ಸ್ವಾಮಿ ಅವರು ತಮ್ಮ ಸ್ನಾತಕ ಪದವಿ ಅಧ್ಯಯನ ಕಾಲದಲ್ಲಿ (1958-61) ಶ್ರೀ ಜೆ.ಆರ್. ಲಕ್ಷ್ಮಣರಾಯರ ವಿದ್ಯಾರ್ಥಿ. ಅವರಿಂದ ಸಾವಯವ ರಸಾಯನ ವಿಜ್ಞಾನದಲ್ಲಿ ಸ್ಫೂರ್ತಿ ಪಡೆದವರು. ಕರ್ನಾಟಕ ಹಾಗೂ ಭಾರತ ಸರಕಾರಗಳಿಂದ ಅನುದಾನಿತವಾಗಿದ್ದ ನಾಲ್ಕು ಬೃಹತ್ ಸಂಶೋಧನಾ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಶೃಂಗೇರಿಯ ಸುತ್ತಮುತ್ತಣ ಸಹಜ ಅರಣ್ಯಗಳ ಏಕಸಸ್ಯ ತೋಪುಗಳ, ಸೊಪ್ಪಿನ ಬೆಟ್ಟಗಳ, ಕೃತಕವಾಗಿ ಬೆಳೆಯಿಸಿದ ಅರಣ್ಯಗಳ ಜೀವಿ ಪರಿಸ್ಥಿತಿಯ ಹಾಗೂ ಮಣ್ಣುಗಳ ಅಧ್ಯಯನ ಮಾಡಿದವರು. ಕೃತಿಗಳು: ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು, ಇಂಧನಗಳು, ಗಾಳಿ ಮತ್ತು ಅನಿಲಗಳು, ಅಣು ಪರಮಾಣು ಮತ್ತು ಸಂಯುಕ್ತಗಳು ...
READ MORE