ʻಟಿಕೆಟ್ ಇಲ್ಲ ಪ್ರಯಾಣ ನಿಲ್ಲಲ್ಲʼ ಕೃತಿಯಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಜತೆಗೆ, ಬದುಕಿನ ಮಟ್ಟವನ್ನು ಸುಧಾರಿಸಿಕೊಳ್ಳಲು ಆಂಧ್ರಪ್ರದೇಶದಿಂದ ಕೊಚ್ಚಿಗೆ ವಲಸೆ ಹೋಗುವ ದಿನಗೂಲಿ ಕಾರ್ಮಿಕರ ಬದುಕಿನ ಬವಣೆಗಳು, ಟಿಕೆಟ್ ಖರೀದಿಸಲು ಹಣವಿಲ್ಲದೆ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವ ಕಷ್ಟನಷ್ಟಗಳು ಮನೋಜ್ಞವಾಗಿ ಮೂಡಿಬಂದಿದೆ. ದುಡಿಮೆಗಾಗಿ ಪರರಾಜ್ಯಕ್ಕೆ ವಲಸೆ ಹೋಗಿರುವ ತನ್ನ ಪೋಷಕರು ತಮ್ಮ ದುಡಿಮೆಯ ಹಣದಲ್ಲಿ ತನಗೆ ಒಂದು ಜೊತೆ ಚಪ್ಪಲಿಯನ್ನಾದರೂ ಕೊಡಿಸುತ್ತಾರೆ ಎಂಬ ಬಾಲಕಿಯ ಆಶಯವನ್ನು ಬಿಂಬಿಸುವ ಕಥೆಯಂತೂ ಹೃದಯಸ್ಪರ್ಶಿ.
ಅಬ್ಬೂರು ಪ್ರಕಾಶ್ ಅವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮೂರು ದಶಕಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೃತಿಗಳು: ಟಿಕೆಟ್ ಇಲ್ಲ,ಪ್ರಯಾಣ ನಿಲ್ಲಲ್ಲ ...
READ MORE