ವಿಶ್ವಕಥಾಕೋಶದ 15ನೇ ಸಂಪುಟದಲ್ಲಿ ಇಟಲಿ ಮತ್ತು ಆಸ್ಟ್ರೀಯಾ ದೇಶದ ಕತೆಗಳಿವೆ. ಡೇಗೆ ಹಕ್ಕಿ -ಜೊವಾನ್ನಿ ಬೊಕ್ಕಾಚ್ಚೊ, ಜ್ಯೋತಿಷಿ ಮತ್ತು ಕತ್ತೆ -ಓರ್ತೆನ್ಸಿಟಿ ಲಾಂದೊ, ಪೈಥಾಗೊರಾಸನ ಪ್ರಮೇಯ -ಎನ್ರಿಕೊ ಕಾಸ್ತೆಲೂನ್ವೋವೊ, ಚಿನ್ಚಿ -ಲುಯಿಜಿ ಪಿರಾಂದೆಲ್ಲೊ, ಲೂಲುವಿನ ವಿಜಯ -ಮಾತಿಲುದೆ ಸೆರಓ, ನನ್ನ ಸಾವಿನ ಕಥೆ -ಲಾಉರೊ ದೆ ಬೋಸಿಸ್, ಗುಪ್ತ ದಾಳಿ -ಬೆಪ್ಪೆ ಫೆನೋಲ್ಯೊ, ಸ್ಪೆಪ್ಫೀಲ್ಡ್ -ಹಾಇಮಿಟೊ ಫಾನ್ ಡೋಡ್ರರ್, ಏಳನೆಯ ಬಾವಿ -ಫ್ರೆಡ್ ವಾಣ್ಡರ್, ಕ್ರಾಂಬಾಂಬೂಲಿ -ಮಾರಿ ಫಾನ್, ಎಬ್ನರ್-ಎಶನ್ಬಾಖ್, ಸತ್ತವರು ಮೂಕರು -ಆರ್ಟುಆರ್ ಶ್ನಿತ್ಸ್ಲರ್, ಚಂದ್ರಕಿರಣದ -ಓಣಿ ಷ್ಟೆಫಾನ್ ತ್ಲ್ವಾಇಗ್.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE