‘ಹಾರಿಕೊಂಡು ಹೋದವನು’ ಎಸ್. ದಿವಾಕರ್ ಅವರು ಅನುವಾದಿಸಿರುವ ಕತಾಸಂಕಲನ. ಹಲವು ದೇಶಗಳ ಅತಿಸಣ್ಣ ಕತೆಗಳು ಇಲ್ಲಿ ಸಂಕಲನಗೊಂಡಿವೆ. ‘ದಿವಾಕರ್ ವಿಶ್ವಸಾಹಿತ್ಯಕ್ಕೆ ಬೆಳಕಿಂಡಿಯಂತೆ ಇರುವವರು. ಒಂದರ್ಥದಲ್ಲಿ ವರ್ಲ್ಡ್ ಲಿಟರೇಚರ್ನ ವಿಕಿಪೀಡಿಯಾ. ಹೀಗಾಗಿ ಅವರ ಹುಡುಕಾಟ, ಸಂಪಾದನೆ ಕುತೂಹಲ ಹುಟ್ಟಿಸುವಂತೆ ಇರುತ್ತವೆ ಮತ್ತು ಅದಕ್ಕೋಸ್ಕರ ಕಾಯುವಂತೆ ಮಾಡುತ್ತವೆ’ ಎನ್ನುತ್ತಾರೆ ಲೇಖಕ ಜೋಗಿ.
ಈ ಕೃತಿಗೆ ಮುನ್ನುಡಿ ಬರೆದಿರುವ ಅವರು, ‘ನಾವು ನಿರೀಕ್ಷಿಸಬಹುದಾದ ಒಂದೇ ಒಂದು ಕತೆಯೂ ಈ ಸಂಕಲನದಲ್ಲಿಲ್ಲ. ನಾವು ಓದಿರಬಹುದಾದಂಥ ಕತೆಯೂ ನಮಗೆ ಸಿಗುವುದಿಲ್ಲ. ಹೀಗೇ ನಡೆಯುತ್ತದೆ ಎಂದು ಊಹಿಸಬಹುದಾದ ಸನ್ನಿವೇಶಗಳನ್ನು ಒಳಗೊಂಡಿರುವ ಕತೆಯೂ ಇಲ್ಲಿ ನಮಗೆ ದೊರೆಯುವುದಿಲ್ಲ. ಕತೆಯ ಮಾತು ಬಿಡಿ, ಒಂದೊಂದು ವಾಕ್ಯವೂ ನಮಗೆ ಅಪರಿಚಿತ. ಹೀಗಾಗಿಯೇ ಅವು ನಮ್ಮ ಓದುವ ಹುಮ್ಮಸ್ಸನ್ನು ಹೆಚ್ಚಿಸುತ್ತಾ ಹೋಗುತ್ತವೆ’ ಎಂದಿದ್ದಾರೆ. ಇಲ್ಲಿಯ ಕತೆಗಳ ಕುರಿತು ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, ಕೆ.ವಿ ಅಕ್ಷರ ಅವರು ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...
READ MORE