ಗ್ರೀಸ್ ನ ಪ್ರಖ್ಯಾತ ಕವಿ ಹೋಮರನ ಇಲಿಯಡ್ ಮಹಾಕಾವ್ಯದ ಸಂಕ್ಷಿಪ್ತ ಕಥನ ಟ್ರೋಜನ್ ಯುದ್ಧ ಕೃತಿಯನ್ನು ಪ್ರಕಟಿಸಲಾಗಿದೆ. ಗ್ರೀಕರು ಟ್ರೋಜನರ ಮೇಲೆ ದಂಡೆತ್ತಿ ಬಂದುದು, ಟ್ರೋಜನ್ ಪಕ್ಷದ ಸೇನಾಪತಿ ಹೆಕ್ಟರನ ಸಾವು, ಮತ್ತು ಶವ ಸಂಸ್ಕಾರ ಮುಂತಾದ ವಿಚಾರಗಳನ್ನು ಇಲ್ಲಿರುವ ಕಥೆಗಳು ವಿವರಿಸುತ್ತದೆ. ಈ ಕೃತಿಯನ್ನು ಕೆ.ಎಂ. ಸೀತಾರಾಮಯ್ಯ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಕೆ.ಎಂ.ಸೀತಾರಾಮಯ್ಯನವರು 1929 ಅಕ್ಟೋಬರ್ 10ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೆಂಪಸಾಗರದಲ್ಲಿ ಜನಿಸಿದರು. ತಾಯಿ ವೆಂಕಟಲಕ್ಷ್ಮಮ್ಮ, ತಂದೆ ಕೆ.ಮೈಲಾರಯ್ಯ. ಅರಸೀಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸೀತಾರಾಮಯ್ಯನವರು ಹಾಸನದಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲದಿಂದ ಸ್ನಾತಕೋತ್ತರ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ರಾಜ್ಯದ ನಾನಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರು 2023 ನ. 20 ರಂದು ನಿಧನರಾದರು. ಸೀತಾರಾಮಯ್ಯನವರ ಪ್ರಮುಖ ಕೃತಿಗಳೆಂದರೆ ಸಪ್ತಸ್ವರ, ಮಾನಸಪೂಜೆ, ರಾಜರಹಸ್ಯ, ಸಂನ್ಯಾಸಿ, ಇಲಿಯಡ್ ಮತ್ತು ಒಡಿಸ್ಸಿಗಳನ್ನು ಕನ್ನಡಕ್ಕೆ ...
READ MORE