ಮಹಾಕವಿ ಸೋಮದೇವಭಟ್ಟನ ಕಥಾಸರಿತ್ಸಾಗರದ ಅನುವಾದದ ಮಾಲಿಕೆಯಲ್ಲಿನ ಮೊದಲ ಸಂಪುಟವಾಗಿದೆ ಇದು. ಮೂಲದ ಮೊದಲ ಲಂಬಕವು ಈ ಸಂಪುಟದ ಕಥಾವಿಷಯವಾಗಿದೆ. ಇದರಲ್ಲಿ ವರರುಚಿ, ವ್ಯಾಡಿ ಇಂದ್ರದತ್ತ, ಬ್ರಹ್ಮದತ್ತ, ಮಯಾಸುರನ ಮಕ್ಕಳು, ಪಾಣಿನಿ, ಆದಿತ್ಯವರ್ಮ, ಗುಣಾಢ್ಯ, ಸಾತವಾಹನ, ಶಿಬಿ ಇವರ ಕಥೆಗಳ ಜೊತೆಗೆ ಬೃಹತ್ಕಥೆಯ ಕಥೆಯನ್ನು ಕೂಡ ಈ ಕೃತಿ ಒಳಗೊಂಡಿದೆ. ತನ್ನ ಕೃತಿಯ ಬಹುಭಾಗವನ್ನು ನಿರಾಶೆಯಿಂದ ಸುಟ್ಟು, ರಾಜ ಸಾತವಾಹನನ ಕೋರಿಕೆಯ ಮೇರೆಗೆ ಕಡೆಯ ಒಂದು ಲಕ್ಷ ಶ್ಲೋಕಗಳನ್ನುಳ್ಳ ನರವಾಹನದತ್ತನ ಕಥೆಯನ್ನು ಅವನಿಗೆ ಕೊಡುತ್ತಾನೆ. ಈ ಎಲ್ಲಾ ವಿಷಯಗಳ ಕುರಿತು ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
ಸಂಸ್ಕೃತ ವಿದ್ವಾಂಸ ಹೆಚ್.ವಿ. ನಾಗರಾಜರಾವ್ ಮೂಲತಃ ಕೋಲಾರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಯಲ್ಲಿ (10-9-1942) ಹುಟ್ಟಿದರು. ಎರಡೂವರೆ ವರ್ಷದ ಬಾಲಕರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅಜ್ಜನ ಮನೆಯಲ್ಲಿ ಬೆಳೆದರು. ಪ್ರೌಢಶಾಲೆಯ ವ್ಯಾಸಂಗದ ಬಳಿಕ ಬಟ್ಟೆಯ ಅಂಗಡಿಯಲ್ಲಿ ದುಡಿದರು. ವಿದ್ಯಾಗುರು ವಿದ್ವಾನ್ಎನ್.ವಿ. ಅನಂತರಾಮಯ್ಯನವರು ಇವರಿಗೆ ನೆರವಾಗುತ್ತಾರೆ. ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತರಾಗಿ ಮೈಸೂರಿಗೆ ಬಂದು ಸಂಸ್ಕೃತ ಮಹಾ ಪಾಠಶಾಲೆ ಸೇರಿ, ಅಲಂಕಾರ ಶಾಸ್ತ್ರಗಳನ್ನು ಕಲಿತರು. ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದರು. ಇವರ ವ್ಯಾಕರಣ ಗುರು ವಿದ್ವಾನ್ ಸೋ. ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮಲ್ಲಿ ಕಲಿಯಲು ಬಂದ ...
READ MORE