ರವೀಂದ್ರರ ಕಥಾಮಂಜರಿಯ ಎರಡನೆಯ ಸಂಪುಟ ಇದು. ಇದನ್ನು ಅಹೋಬಲ ಶಂಕರ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಏನೇ ಆದರೂ ದೇವತೆ ಬಗೆಗಿನ ನಿಷ್ಠೆಯನ್ನು ಕುರುಡಾಗಿ ಅನುಸರಿಸುತ್ತಿದ್ದ ವಿಧವೆಯೊಬ್ಬಳು, ಹಂದಿಯು ದೇವಸ್ಥಾನದ ಒಳಕ್ಕೆ ಪ್ರವೇಶಿಸಿದರೂ ಪರವಾಗಿಲ್ಲ ಆದರೆ ಕೀಳುಜಾತಿಯವರು ಪ್ರವೇಶಿಸಬಾರದು ಎಂದು ಮೊಂಡು ಹಠವನ್ನು ಹಿಡಿದ ಪ್ರಸಂಗ, ಗಂಡಸು ತಾನು ಮಾಡಿದ ತಪ್ಪಿನಿಂದ ಅಳುಕಿ, ಅದನ್ನು ಹೆಂಗಸಿನ ಕುತ್ತಿಗೆಗೆ ಕಟ್ಟಿ, ಅವಳನ್ನು ತೊರೆದು, ಧರ್ಮಶೀಲನಾಗಿದ್ದರೂ ವಿಧಿವಶದಿಂದ ಅವಳ ಎದುರು ತಾನೇ ಸಣ್ಣವನಾಗುವ, ಅವಳು ದೇವತೆಯಂತೆ ಕಾಣುವ ಕಥೆ ವಿಚಾರಕ , ಇಂತಹ ಮಾನವೀಯ ಹಾಗೂ ಅಮಾನವೀಯ ಮುಖಗಳನ್ನು ತೋರಿಸುವಂತಹ 31 ಕಥೆಗಳು ಈ ಸಂಪುಟದಲ್ಲಿದೆ.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಹೋಬಲ ಶಂಕರ ಅವರು ಅತ್ಯುತ್ತಮ ಅನುವಾದಕರು. ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದ ಅವರು ಬರಹಗಾರ, ಪತ್ರಿಕೋದ್ಯಮಿ ಹಾಗೂ ಮಹಾನ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು. ಬಂಗಾಳಿಯ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೇರವಾಗಿ ಅನುವಾದಿಸಿದ ಹಿರಿಮೆ ಅವರದು. ...
READ MORE