ಕಥಾ ರಚನೆಯಲ್ಲಿ ವೈವಿಧ್ಯಮಯ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ವಿಶಿಷ್ಟ ಲೇಖಕಿ ಮೀನಾ ಕಾಕೊಡಕಾರ. ಮಧ್ಯಮವರ್ಗ ಮತ್ತು ಕೆಳ ಮಧ್ಯಮವರ್ಗಗಳ ನಿತ್ಯದ ಬದುಕನ್ನು ಆಧರಿಸಿ, ಅವರ ಛಲ, ಹೋರಾಟಗಳನ್ನು, ಮಾನಸಿಕ ಒಳತೋಟಿಗಳನ್ನು ವಾಸ್ತವ ನೆಲೆಯಿಂದ ಚಿತ್ರಿಸಿದ್ದಾರೆ. ಕೆಲವೇ ಪುಟಗಳ ವ್ಯಾಪ್ತಿಯಲ್ಲಿ ಬಹು ಅಡಕವಾಗಿ ಜೀವನ ಪ್ರೀತಿಯ ಸಂದೇಶವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಗಂಭೀರ ಕತೆಗಳೊಂದಿಗೆ ಲಘುಧಾಟಿಯ ಕತೆಗಳನ್ನು ಈ ಸಂಕಲನವು ಒಳಗೊಂಡಿದೆ. ಸರಳ ನಿರೂಪಣೆ ಹಾಗೂ ಬೌದ್ಧಿಕ ಆಯಾಮದೊಂದಿಗೆ ಮನರಂಜನೆಯ ಅಂಶವನ್ನೂ ಹೊಂದಿದ್ದು, ಎಲ್ಲ ವರ್ಗದ ಓದುಗರನ್ನು ಸೆಳೆಯುವ ರೀತಿಯ ಕಥೆಗಳಾಗಿವೆ. ಆಧುನಿಕ ಕೊಂಕಣಿ ಮಹಿಳಾ ಸಾಹಿತ್ಯದ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಲೇಖಕಿಯರಲ್ಲಿ ಮೀನಾ ಕಾಕೋಡಕಾರ್ ಒಬ್ಬರು. ಈ ಸಂಕಲನದಲ್ಲಿ ಲೇಖಕಿ ಗೀತಾ ಶೆಣೈ. ಒಟ್ಟು ಹತ್ತು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE