ಕೆ.ಪ್ರಭಾಕರನ್ ಅವರ ಕಥಾ ಸಂಕಲನ ‘ಪಂಗುರುಪುಷ್ಫದ ಜೇನು ಮತ್ತು ಇತರೆ ಮಲಯಾಳಿ ಕಥೆಗಳು’. ಈ ಸಂಕಲನದಲ್ಲಿ ನಾ.ಡಿಸೋಜ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ‘ ಇಲ್ಲಿಯ ಕತೆಗಳು ಓದುಗರನ್ನು ಕೇರಳದ ವರ್ಣರಂಜಿತ ಬದುಕಿನ ಒಳಗೆ ಕರೆದೊಯ್ಯುತ್ತ ಅಪೂರ್ವವಾದ ಅನುಭವವನ್ನು ನಮಗೆ ನೀಡುತ್ತವೆ. ಪರಿಸರವನ್ನು ಸದಾ ಪೂಜಿಸುವ ಈ ಜನ ಪರಿಸರದ ಮೇಲೆ ಎಷ್ಟೊಂದು ಅವಲಂಭಿಸಿಕೊಂಡಿದ್ದಾರೆ ಅನ್ನುವುದರ ಒಂದು ಚಿತ್ರಣ ಕೂಡ ಇಲ್ಲಿ ದೊರೆಯುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ.
ವೃತ್ತಿಯಿಂದ ಎಂಜಿನಿಯರ್ ಆಗಿರುವ ಕೆ. ಪ್ರಭಾಕರನ್ ಅವರು ಮೆಸ್ಕಾಮ್ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ)ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು (2014ರ ವರೆಗೆ). ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಸದ್ಯ ಶಿವಮೊಗ್ಗ ನಿವಾಸಿ. ಸಾಹಿತ್ಸಯ ಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಲೆಯಾಳಂನಿಂದ ’ಕನಸನೂರಿನ ಕಿಟ್ಟಣ್ಣ’ ಕೃತಿಯನ್ನು ಕನ್ನಡೀಕರಿಸಿದ್ದಾರೆ. ...
READ MORE