ಕಥಾಸರಿತ್ಸಾಗರದ ಎಂಟನೆಯ ಸೂರ್ಯಪ್ರಭ ಲಂಬಕ ಈ ಸಂಪುಟದಲ್ಲಿದೆ. ಮನುಷ್ಯನಾಗಿ ಇದ್ದುಕೊಂಡೇ ಸೂರ್ಯ ಪ್ರಭನು ವಿದ್ಯಾಧರ ಚಕ್ರವರ್ತಿಯಾಗುವುದು ಈ ಕೃತಿಯಲ್ಲಿನ ಪ್ರಮುಖ ಕಥಾವಸ್ತು. ಬಾಲ್ಯದಲ್ಲಿಯೇ ಅವನಿಗೆ, ಇಂದ್ರನ ಆಶಯವನ್ನು ಧಿಕ್ಕರಿಸಿ ಮಯಾಸುರನು ಎಲ್ಲಾ ವಿದ್ಯಗಳನ್ನೂ ಕಲಿಸಿಕೊಡುತ್ತಾನೆ. ಸೂರ್ಯಪ್ರಭನು ಯುವರಾಜನಾದ ಮೇಲೆ ದೇಶ ಸಂಚಾರಮಾಡುತ್ತಾ, ಒಂಬತ್ತು ಸುಂದರಿಯರನ್ನು ಮದುವೆಯಾಗಿ ರಾಜ್ಯಕ್ಕೆ ಹಿಂದಿರುಗುತ್ತಾನೆ. ನಂತರ ಮಯನ ಪ್ರೇರಣೆಯ ಮೇಲೆ, ತನ್ನ ಪ್ರತಿಸ್ಪರ್ಧಿಯಾಗಿದ್ದ ಶ್ರುತಶರ್ಮನ ಮೇಲೆ ಆಕ್ರಮಣ ಮಾಡುತ್ತಾನೆ. ಈಶ್ವರನ ಸಂಧಾನದಿಂದಾಗಿ ದಕ್ಷಿಣವೇದಿ ಮತ್ತು ಉತ್ತರ ವೇದಿಗಳಿಗೆ ಇವರಿಬ್ಬರೂ ಚಕ್ರವರ್ತಿಗಳಾಗಿ, ದೇವಾಸುರರ ನಡುವೆ ಮೈತ್ರಿ ಏರ್ಪಡುತ್ತದೆ. ಈ ಎಲ್ಲಾ ವಿಷಯಗಳ ಬಗ್ಗೆ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಎಸ್.ಆರ್. ಲೀಲಾ ಅವರು ಜನಿಸಿದ್ದು, 1950 ಜನವರಿ 16ರಂದು ಕೋಲಾರದ ಸಂಪಂಗೆರೆಯಲ್ಲಿ ವೃತ್ತಿಯಲ್ಲಿ ಸಂಸ್ಕೃತ ಪ್ರಾಚಾರ್ಯರಾಗಿದ್ದ ಇವರು, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಸಿಂಟಿಕೇಟ್ ಸದಸ್ಯರುಮ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಆಗಿದ್ದಾರೆ. ಜಗ್ಗು ವಕುಲ ಭೂಷಣ (ಜೀವನ ಚರಿತ್ರೆ) ಹಾಗೂ ಸೌರಭ (ಲೇಖನ ಸಂಗ್ರಹ) ಇವರ ಪ್ರಮುಖ ಕೃತಿಗಳು. ...
READ MORE