‘ಕಾಡುವ ಕತೆಗಳು’ ತೆಲುಗು ಕವಿ ಸಲೀಂ ಅವರ ತೆಲುಗು ಸಣ್ಣಕತೆಗಳ ಕನ್ನಡಾನುವಾದ. ಅನುವಾದಕಾರಿ ಕನ್ನಡ ಓದುಗರಿಗೆ ಚಿರಪರಿಚಿತರಾಗಿರುವ ಧನಪಾಲ ನಾಗರಾಜಪ್ಪ ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಈ ಸಂಕಲನದ ಎಲ್ಲಾ ಕಥೆಗಳು ಯಾವುದೇ ಕಾರಣಕ್ಕೊ ಎಲ್ಲಿಯೂ ನಿಲ್ಲಿಸದೆ, ಬೇಸರಿಸದೆ ಓದಿಸಿಕೊಂಡು ಹೋಗುತ್ತವೆ. ಕಥಾ ಹಂದರದ ದೃಷ್ಟಿಯಿಂದ ನೋಡುವುದಾದರೆ ಪಾತ್ರಗಳು, ಸನ್ನಿವೇಶಗಳು ಮತ್ತು ಸಂಭಾಷಣೆ, ಸರಳ ನಿರೂಪಣೆಯ ಕಾರಣದಿಂದಾಗಿ ಇಷ್ಟವಾಗುತ್ತವೆ. ಕನ್ನಡ ನೆಲದ್ದೇ ಆದ ಕಥೆಗಳಿವು ಅಂತ ಅನಿಸುವಲ್ಲಿ ಅನುವಾದಕರು ಯಶಸ್ವಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ಸಂವೇದನಾಶೀಲ ಕಥೆಗಳನ್ನು ಅನುವಾದಿಸುವ ಮೂಲಕ ಈ ಕಾಲದ ಸಾಹಿತ್ಯಿ ಹಾಗೂ ಸಾಂಸ್ಕೃತಿಕ ಪರಿವೇಷಕ್ಕೆ ಮುಖಾಮುಖಿಯಾಗಿ ಬಹುತ್ವ ಕಟ್ಟುವ ಮಾರ್ಗವಾಗಿಸಿಕೊಂಡಿದ್ದಾರೆ.
ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ನಾಗರಾಜಪ್ಪ ಹಾಗೂ ರಾಮಚಂದ್ರಮ್ಮ ದಂಪತಿಯ ಮಗನಾಗಿ 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ಜನಿಸಿದರು. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 15 ವರ್ಷಗಳಿಂದ ಏರ್ ಮೆನ್ ಆಗಿ ವೈದ್ಯಕೀಯ ಸಹಾಯಕನ ವೃತ್ತಿ. ಕಳೆದ 15 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ), ಕಾಡುವ ಕಥೆಗಳು (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ತಣ್ಣೀರ ...
READ MORE