ಮ್ಯಾಕ್ಸಿಂ ಗೋರ್ಕಿ ಅವರು ರಷ್ಯಾದ ಸುಪ್ರಸಿದ್ಧ ಕಥೆ-ಕಾದಂಬರಿಕಾರ. ‘ಓಲ್ಡ್ ಇಸರ್ಜಿಲ್’ ನಿಂದ ಮೂರು ಹಾಗೂ ‘ಟೇಲ್ಸ್ ಆಫ್ ಇಟಲಿ’ಯಿಂದ ನಾಲ್ಕು ಕಥೆಗಳನ್ನು ಆಯ್ದು ಕೆ.ವಿ. ಸುಬ್ಬಣ್ಣ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಗೋರ್ಕಿಯ ಕಥೆಗಳು.
ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಈ ಕಥೆಗಳನ್ನು ಜನಶಕ್ತಿ ಪ್ರಕಾಶನ (1955) ಪ್ರಕಟಿಸಿತ್ತು. ಮತ್ತೊಂದು ಕಥೆ ಸೇರಿಸಿ ಸುಬ್ಭಣ್ಣನವರು ಪ್ರಕಟಿಸಿದರು. ಈಗಿರುವುದು ಮೂರನೇ ಮುದ್ರಣ. 1971ರಲ್ಲಿ ಈ ಕೃತಿಗೆ ಸೋವಿಯತ್ ಲ್ಯಾಂಡ್ ನ ನೆಹರೂ ಪ್ರಶಸ್ತಿ ದೊರಕಿದೆ. ಕೃತಿಯಲ್ಲಿ ಜಂಭದ ಮರಿ, ಬದುಕಿನ ಹಾಡು ಪಾಡು, ಜ್ವಲಂತ ಹೃದಯ, ಕೂಲಿ ಹೇಳಿದ ಕಥೆ, ಮುದುಕ ಹೇಳಿದ ಕಥೆ, ತೈಮೂರನ ಸೋಲು ಹಾಗೂ ತಾಯಿಯ ಒಲವು-ಈ ಕಥೆಗಳ ಅನುವಾದ ಒಳಗೊಂಡಿದೆ.
ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...
READ MORE