ಖ್ಯಾತ ಲೇಖಕ ಡಾ. ಆರ್. ಕೆ. ನಾರಾಯಣ್ ಅವರ ಆಂಗ್ಲ ಕೃತಿ-ಮಾಲ್ಗುಡಿ ಡೇಸ್. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಲೇಖಕ ಹೆಚ್. ರಾಮಚಂದ್ರಸ್ವಾಮಿ. ಮಾಲ್ಗುಡಿ ಎಂಬುದು ಮೂಲ ಲೇಖಕರ ಕಾಲ್ಪನಿಕ ಗ್ರಾಮ. ಅದರ ವರ್ಣನೆ, ಬಾಲ್ಯ ಕಳೆದ ದಿನಗಳ ವೈಭವ ಎಲ್ಲವನ್ನೂ ವರ್ಣನಾತೀತವಾಗಿ ವಿವರಿಸಿದ್ದಾರೆ. ಮೂಲ ಕೃತಿಯು ಇಂತಹ 32 ಕಥೆಗಳನ್ನು ಒಳಗೊಂಡಿದೆ. ವ್ಯಾಪಾರಿಗಳು, ಭಿಕ್ಷುಕರು, ದನಗಾಹಿಗಳು, ಗೋಸಾಯಿಗಳು, ಶಿಕ್ಷಕರು, ಕಳ್ಳಕೊರಮರು-ಎಲ್ಲ ರೀತಿಯ ಪಾತ್ರಗಳೂ ಮೂರ್ತೀಭವಿಸಿವೆ. ಕೃತಿಯ ಅನುವಾದ ಕಲೆಯು ಪರಿಣಾಮಕಾರಿಯಾಗಿದೆ.
ಡಾ. ಹೆಚ್. ರಾಮಚಂದ್ರ ಸ್ವಾಮಿ ಅವರು ತಮ್ಮ ಸ್ನಾತಕ ಪದವಿ ಅಧ್ಯಯನ ಕಾಲದಲ್ಲಿ (1958-61) ಶ್ರೀ ಜೆ.ಆರ್. ಲಕ್ಷ್ಮಣರಾಯರ ವಿದ್ಯಾರ್ಥಿ. ಅವರಿಂದ ಸಾವಯವ ರಸಾಯನ ವಿಜ್ಞಾನದಲ್ಲಿ ಸ್ಫೂರ್ತಿ ಪಡೆದವರು. ಕರ್ನಾಟಕ ಹಾಗೂ ಭಾರತ ಸರಕಾರಗಳಿಂದ ಅನುದಾನಿತವಾಗಿದ್ದ ನಾಲ್ಕು ಬೃಹತ್ ಸಂಶೋಧನಾ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಶೃಂಗೇರಿಯ ಸುತ್ತಮುತ್ತಣ ಸಹಜ ಅರಣ್ಯಗಳ ಏಕಸಸ್ಯ ತೋಪುಗಳ, ಸೊಪ್ಪಿನ ಬೆಟ್ಟಗಳ, ಕೃತಕವಾಗಿ ಬೆಳೆಯಿಸಿದ ಅರಣ್ಯಗಳ ಜೀವಿ ಪರಿಸ್ಥಿತಿಯ ಹಾಗೂ ಮಣ್ಣುಗಳ ಅಧ್ಯಯನ ಮಾಡಿದವರು. ಕೃತಿಗಳು: ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು, ಇಂಧನಗಳು, ಗಾಳಿ ಮತ್ತು ಅನಿಲಗಳು, ಅಣು ಪರಮಾಣು ಮತ್ತು ಸಂಯುಕ್ತಗಳು ...
READ MORE