ಹನ್ನೊಂದನೆಯ ಶತಮಾನದ ಸಂಸ್ಕೃತ ಜೈನ ಕಥೆಗಳ ಸಂಕಲನವನ್ನು ಕನ್ನಡದ ಖ್ಯಾತ ವಿಮರ್ಶಕ, ಕವಿ, ಹಾಗೂ ಅನುವಾದಕರಾದ ಪ್ರೊ. ಡಿ ಎ. ಶಂಕರರು ಕನ್ನಡಕ್ಕೆ ತಂದಿದ್ದಾರೆ.
ಪ್ರಾಚೀನ ಭಾರತೀಯ ಕಥಾಸಾಹಿತ್ಯದಲ್ಲಿ ಜೈನರು ಅತ್ಯಂತ ಆಕರ್ಷಕ ಕಥೆಗಾರರಾಗಿದ್ಧಾರೆ. ಇಲ್ಲಿರುವ ಅನೇಕ ಕಥೆಗಳ ಲಕ್ಷಣ ಎಂದರೆ, ಆಧ್ಯಾತ್ಮಿಕ ವಿಕಾಸದ ಅನಿಶ್ಚಿತ ಸ್ಥಿತಿಗಳ ಚಿತ್ರಣ. ಮನುಷ್ಯರ ಬಗೆಗೆ ಕಟುನಿಷ್ಠುರ ದೃಷ್ಟಿಕೋನ ಜೈನ ಕಥಾ ಸಂವೇದನೆಯ ಮುಖ್ಯ ಲಕ್ಷಣವಾಗಿದೆ.ಈ ’ಕಥಾಕೋಶ’ದಲ್ಲಿನ ’ಎರಡು ಗಿಳಿಗಳ ಕಥೆ’ ಜೈನಕಥಾ ಪ್ರತಿಭೆಯ ಪ್ರಾತಿನಿಧಿಕ ಕಥೆಯಾಗಿದೆ. ಓದಿದಷ್ಟೂ ಅರ್ಥವಿಸ್ತಾರವಾಗುತ್ತ ಹೋಗುವ ಜನ್ಮಾಂತರ ಕತೆಯಾಗಿವೆ.
ಇಲ್ಲಿರುವ ಕತೆಗಳಲ್ಲಿ ಮನುಷ್ಯರು ಬದಲಾಗುವುದು ತತ್ವಗಳಿಂದಲ್ಲ, ಬದಲಾಗಿ ದಿಗ್ಬ್ರಮೆ, ತಲ್ಲಣಗಳಿಂದ ಎನ್ನುವುದನ್ನು ಗಮನಿಸಬಹುದು. ಯಶೋಭದ್ರೆಯ ಕತೆ, ರಿಷಿದತ್ತಳ ಕತೆ, ಲಲಿತಾಂಗನ ಕತೆ, ಆರಾಮಶೋಭಾ ಮತ್ತು ಕೃತಜ್ಞ ಸರ್ಪದ ಕತೆ, ಅಮರದತ್ತ, ಮಿತ್ರಾನಂದರ ಕತೆ ಇನ್ನೂ ಅನೇಕ ಜೈನ ಕತೆಗಳನ್ನು ’ಕಥಾಕೋಶ’ ಒಳಗೊಂಡಿದೆ.
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಡಿ.ಎ. ಶಂಕರ ಅವರು ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ನಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಎಮರಿಟಸ್ ಪ್ರೊಫೆಸರ್ ಆದವರು. ಕಾವ್ಯ, ಅನುವಾದ, ವಿಮರ್ಶೆ ಹಾಗೂ ನಾಟಕ ಹೀಗೆ ವಿವಿಧ ಪ್ರಕಾರಗಳಲ್ಲಿ ಶಂಕರ್ ಅವರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್ನ ಫೀಲ್ಡ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪಡೆದ ಅವರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿಯ ಫೆಲೋ ಆಗಿದ್ದರು. ಹಾಗೆಯೇ, ಕೆನಡಾದ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಫೆಲೋಶಿಪ್ನಲ್ಲಿ ಕಾರ್ಯನಿರ್ವಹಿಸಿದ್ದವರು. ಬೆಳಕಿನ ಮರ, ನಿಮ್ಮಲ್ಲೊಬ್ಬ, ಪವಾಡ ಅವರ ...
READ MORE