ತೆಲುಗು ಕಥೆಗಳ ಪಿತಾಮಹನೆಂದು ಕರೆಸಿಕೊಳ್ಳುವ ಗುರಜಾಡರು ಸ್ತ್ರೀಪರ ಧ್ವನಿಯಾಗಿದ್ದವರು. ಮಾಸ್ತಿಯವರು ಕನ್ನಡದಲ್ಲಿ ಸಣ್ಣ ಕಥೆಗಳ ಜನಕರೆಂದು ಜನಮನದಲ್ಲಿ ಹೊಂದಿದ್ದ ಖ್ಯಾತಿಯೇ ತೆಲುಗಿನ ಕಥಾಸಾಹಿತ್ಯದಲ್ಲಿ ಗುರಜಾಡರಿಗೂ ಸಲ್ಲುತ್ತದೆ. ಅವರು ಮಾಸ್ತಿಯವರ ಸಮಕಾಲೀನರಷ್ಟೇ ಅಲ್ಲದೆ ಕನ್ನಡದಲ್ಲಿ ಮಾಸ್ತಿಯವರ ಮೊದಲ ಸಣ್ಣಕಥೆ ಪ್ರಕಟವಾದ ವರ್ಷವೇ ತೆಲುಗಿನಲ್ಲಿ ಗುರಜಾಡರ ಮೊದಲ ಕಥೆಯೂ ಪ್ರಕಟ ವಾಗಿದ್ದೊಂದು ವಿಶೇಷವೇ. ಉತ್ತಮ ಆದರ್ಶ, ಅಪ್ಪಟ ದೇಸೀಯ ಚಿಂತನೆ ಮೈಗೂಡಿಸಿಕೊಂಡ ಗುರಜಾಡರು ಬರೆದ ಕಥೆಗಳು ಸಂಖ್ಯೆಯಲ್ಲಿ ಕಡಿಮೆಯಾದರೂ ಮೌಲ್ಯವಂತಿಕೆಯಲ್ಲಿ ಎತ್ತರದ ಸ್ಥಾನ ಗಳಿಸಿವೆ.
ಸ್ತ್ರೀ ಶಿಕ್ಷಣದ ಅವಶ್ಯಕತೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಒತ್ತುಕೊಟ್ಟು ಬರೆದ ಅವರ ಕಥೆಗಳು ಅಂದಿನ ಕಾಲಕ್ಕಷ್ಟೇ ಅಲ್ಲದೆ ಇಂದಿಗೂ ಪ್ರಸ್ತುತವಾದ ವಿಚಾರಗಳೇ. ಇಲ್ಲಿ ಗುರುಜಾಡರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...
READ MORE