ಸಾಹಿತ್ಯಕ್ಕಾಗಿ ರಷ್ಯಾಕ್ಕೆ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ತಂದುಕೊಟ್ಟವನು ಬುನಿನ್. ಆತನ ಅಪರೂಪದ ಕಥೆಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದಾರೆ ಕಥೆಗಾರ ಎಸ್ ಗಂಗಾಧರಯ್ಯ.ತನ್ನ ವಿಶಿಷ್ಟವಾದ ಗ್ರಹಿಕೆ ಮತ್ತು ಗದ್ಯದ ನಾವೀನ್ಯತೆ ಕಾರಣದಿಂದ ಗಮನ ಸೆಳೆದಿರುವ ಬುನಿನ್ ಬರವಣಿಗೆ ಅಷ್ಟೇ ಆಪ್ತವಾದ ಬಗೆಯಲ್ಲಿ ಕನ್ನಡದಲ್ಲಿ ನಳನಳಿಸುವುದನ್ನು ಈ ಸಂಕಲನದ ಕಥೆಗಳಲ್ಲಿ ಕಾಣಬಹುದು. ಅನುವಾದಕ ಗಂಗಾಧರಯ್ಯ ಅವರೇ ಹೇಳುವಂತೆ, ಇಲ್ಲಿರುವುದು ಮಣ್ಣಿನ ಕಣ್ಣಿನ ನೋಟ. ಅದಮ್ಯ ತಾಯ್ತನದ ಹಂಬಲ. ಇಲ್ಲಿ ಪ್ರೀತಿಯ ಮಿಂಚುಗಳಿವೆ, ವಿರಹದ ಕಾರ್ಮೋಡಗಳಿವೆ, ತೋರಿಕೆಯ ಡೌಲುಗಳಿವೆ.
ಎಸ್. ಗಂಗಾಧರಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತಿಘಟ್ಟದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಪ್ರಕಟಿತ ಕೃತಿಗಳು ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಿವೆ. ನವಿಲ ನೆಲ, ಒಂದು ಉದ್ದನೆಯ ನೆರಳು, ಇವರ ಕಥಾ ಸಂಕಲನಗಳು. ’ಬಯಲ ಪರಿಮಳ’ ಎಂಬ ವ್ಯಕ್ತಿಚಿತ್ರ ಸಂಪುಟವನ್ನು ರಚಿಸಿದ್ದಾರೆ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ,- ಎರ್ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ...
READ MORE