ಲೇಖಕ -ಅನುವಾದಕ ಪಾ.ಶ. ಶ್ರೀನಿವಾಸ ಅವರು ತಮಿಳು ಲೇಖಕರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ -ಪ್ರಸಾದ. ಕಲ್ಕಿ, ಅಖಿಲನ, ಜಯಕಾಂತನ್, ಇಂದುಮತಿ, ಮಾಲನ್ ಹೀಗೆ ವಿವಿಧ ಲೇಖಕರ ಒಟ್ಟು ಎಂಟು ಕಥೆಗಳು ಅನುವಾದಗೊಂಡಿವೆ. ಒಡೆದ ಕೋಟೆ, ಅಗ್ನಿ ಪರ್ವತ, ಉಪವಾಸ ವ್ರತ, ಮೆರವಣಿಗೆ, ಜಾಗ ಹೀಗೆ ವಿವಿಧ ಶೀರ್ಷಿಕೆಗಳ ಕಥೆಗಳಿವೆ. ಮೂಲಕಥೆಗಾರರು ತಮಿಳಿನಲ್ಲಿ ಉತ್ತಮ ಸಾಹಿತ್ಯ ರಚಿಸಿದ ಹಿರಿಯ ತಲೆಮಾರಿನವರು. ಈ ಎಲ್ಲ ಲೇಖಕರ ಪರಿಚಯವನ್ನು ನೀಡಿದ್ದು, ಅವರ ಇತರೆ ಸಾಹಿತ್ಯ ಅರಿಯಲು ಸಹಾಯಕವಾಗಿದೆ.
ಲೇಖಕ-ಚಿಂತಕ ಪಾ.ಶ. ಶ್ರೀನಿವಾಸ ಅವರು ತಮಿಳು-ಕನ್ನಡ ಸಾಹಿತ್ಯದ ಸೇತು ಆಗಿ ಸಾಕಷ್ಟು ಅನುವಾದ ಕಾರ್ಯ ಮಾಡಿದ್ದಾರೆ. ಇವರು ಮೂಲತಃ ಮಡ್ಯ ಜಿಲ್ಲೆಯವರು. ಕನ್ನಡದ ಹಾಗೂ ತಮಿಳಿನ ಮಹತ್ವದ ಕೃತಿಗಳನ್ನು ಆಯ್ದು, ಕನ್ನಡಕ್ಕೂ, ತಮಿಳಿಗೂ ಅನುವಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕೃತಿಗಳು: ತಿರುಕ್ಕುರಳ್ (ತಮಿಳು ಮೂಲ, ಪದಶಃ ಅರ್ಥ ಮತ್ತು ಹೊಸಗನ್ನಡ ಅನುವಾದಗಳೊಂದಿಗೆ) ...
READ MORE