ಭಾರತೀಯ ಬೇರೆ ಬೇರೆ ಭಾಷೆಗೆ ಸೇರಿದ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ, ಸಂಪಾದಿಸಿದ ಕೃತಿ ಇದು. ಕಾದಂಬರಿಕಾರ ಅ.ನ.ಕೃಷ್ಣರಾಯರು ಈ ಕೃತಿಯ ಸಂಪಾದಕರು. ಆಸಾಮಿ ಭಾಷೆಯ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ವಸಂತಾದೇವಿ), ಉರ್ದ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಗುರುನಾಥ ಜೋಶಿ), ಗುಜರಾತಿ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಹ.ಪಿ. ಜೋಶಿ), ತಮಿಳು ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಜಯಲಕ್ಷ್ಮಿ ಆರ್. ಶ್ರೀನಿವಾಸನ್), ತೆಲುಗು ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಅ.ತಿ. ಶಾಮಾಚಾರ್ಯ), ಬಂಗಾಳಿ ಸಾಹಿತ್ಯ ಪರಿಚ್ಯದೊಂದಿಗೆ ಎರಡು ಕಥೆಗಳು (ಅನು: ಅ. ನಾರಾಯಣಸ್ವಾಮಿ ಅಯ್ಯರ್), ಮರಾಠಿ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಹ.ಪಿ.ಜೋಶಿ), ಮಲೆಯಾಳಿ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಕಾರ್ಯಹಳ್ಳಿ ರಾಮಕೃಷ್ಣ ಶೆಟ್ಟಿ) ಹಿಂದಿ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಗುರುನಾಥ ಜೋಶಿ) ಹೀಗೆ ಭಾರತೀಯ ವಿವಿಧ ಭಾಷೆಗಳ ಅನುವಾದಿತ ಕಥೆಗಳನ್ನು ಈ ಕೃತಿಯು ಒಳಗೊಂಡಿದೆ.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE