ತೆಲುಗು ಲೇಖಕ ನಕ್ಷತ್ರಂ ವೇಣುಗೋಪಾಲ್ ಅವರ ಕತಾಸಂಕಲನವನ್ನು ಕನ್ನಡದ ಅನುವಾದಕಿ, ಲೇಖಕಿ ಎಂ.ಜಿ.ಶುಭಮಂಗಳ ಅವರು ಅನುವದಿಸಿದ್ದು, ಮೌನಸಾಕ್ಷಿ ಎಂದು ಹೆಸರಿಸಿದ್ದಾರೆ. ರೂಪದರ್ಶಿ ಜಿ.ವೆಂಕಟೇಶ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಶುಭಮಂಗಳ ಅವರು ಬಳಸುವ ಶಬ್ದ ಭಂಡಾರ, ಆಡುಭಾಷೆ, ನಿರೂಪಣಾ ಶೈಲಿಯಿಂದ ಅನುವಾದದ ಕತೆ ಎಂಬ ಕುರುಹೇ ಇಲ್ಲದ ಹಾಗೆ ಕತೆಗಳು ಸಾರ್ವತ್ರಿಕವಾಗಿ ತಟ್ಟುತ್ತವೆ. ಇಲ್ಲಿ ಬಳಸುವ ಭಾಷೆ, ಉಪಮೆಗಳು, ಕತೆಗಳ ಹೂರಣಕ್ಕೆ ಗಾಢತೆಯನ್ನು ನೀಡಿ ಅದರ ಪರಿಣಾಮವಾಗಿ ಹೆಚ್ಚಿಸುತ್ತವೆ. ಮುಖ್ಯವಾಗಿ ಎಲ್ಲಾ ಕತೆಗಳೂ ಮಾನವೀಯ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ ಎಂಬುದಾಗಿ ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ನಾತಿಚರಾಮಿ, ರೈಲ್ವೆ ಸತ್ಯಂ, ವಾತ್ಸಲ್ಯ, ಮೌನಸಾಕ್ಷಿ, ವೇಕ್ ಅಪ್, ಮೃಗಗಳ ನಡುವೆ, ಸೂಪರ್ ಹೀರೋ ಸೇರಿದಂತೆ 11 ಶೀರ್ಷಿಕೆಗಳ ಕತೆಗಳಿವೆ.
ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ೧೯೭೫ರಲ್ಲಿ ಜನನ. ದಿ.ಎಂ.ಆರ್. ಗುಂಡಪ್ಪ ಹಾಗೂ ಎಂ.ಎನ್. ಜಯಲಕ್ಷಮ್ಮ ದಂಪತಿಗಳ ಕಿರಿಯ ಪುತ್ರಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತçದಲ್ಲಿ ಎಂ.ಎ. ಮತ್ತು ಭಾರತೀಯ ವಿದ್ಯಾ ಭವನದ ಕನ್ನಡ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಸೂರ್ಯೋದಯ, ಜೀವನಾಡಿ, ಗೃಹಶೋಭಾ ಪತ್ರಿಕೆಗಳಲ್ಲಿ ಒಂದು ದಶಕದ ಕಾಲ ಉಪ-ಸಂಪಾದಕಿ, ವರದಿಗಾರ್ತಿ, ಅನುವಾದಕಿಯಾಗಿ ಕೆಲಸ ಮಾಡಿದ್ದಾರೆ. ಇಂಡಿಗೋ ಮಲ್ಟಿ ಮೀಡಿಯಾ ಪ್ರಕಟಣಾ ಸಹ ಸಂಸ್ಥಾಪಕಿಯಾಗಿ ದುಡಿದಿದ್ದಾರೆ. ಕಿಂಚ ಸ್ಮಾರಕ ಪ್ರಶಸ್ತಿ ಪುರಸ್ಕೃತರು. ಇವರ ಲೇಖನಗಳು, ಅನುವಾದಿತ ತೆಲುಗು ಕಥೆಗಳು ಸುಧಾ, ಮಯೂರ, ತುಷಾರ, ಸೂರ್ಯೋದಯ, ಗೃಹಶೋಭಾ, ವಿಜಯಕರ್ನಾಟಕ, ಕೆಂಡಸಂಪಿಗೆ, ಡೆಕ್ಕನ್ ...
READ MORE