ಮರಾಠಿಯ ಖ್ಯಾತ ಲೇಖಕಿ ಕಮಲ ದೇಸಾಯಿಯವರ ಕಥೆಗಳನ್ನು ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅರವತ್ತರ ದಶಕದ ಮರಾಠಿಯ ಖ್ಯಾತ ಲೇಖಕಿಯಾದ ಕಮಲ ದೇಸಾಯಿ ಸುಮಾರು 34-35 ಕಥೆಗಳನ್ನು ಬರೆದಿದ್ದಾರೆ. ಅದರಲ್ಲಿ ಹತ್ತು ಕಥೆಗಳನ್ನು ಈ ಸಂಕಲನದ ಮೂಲಕ ಚಂದ್ರಕಾಂತ ಪೋಕಳೆಯವರು ಕನ್ನಡೀಕರಿಸಿದ್ದಾರೆ.
ಕಮಲ ದೇಸಾಯಿಯವರ ಕಥನ ತಂತ್ರದಲ್ಲಿ ವರ್ತಮಾನದಿಂದ ಭೂತಕ್ಕೆ ಸರಿಯುವುದು ಆ ಬಳಿಕ ಮತ್ತೆ ವರ್ತಮಾನಕ್ಕೆ ಬರುವುದಕ್ಕೆ ಅವರು ಮೊದಲಿನಿಂದಲೂ ಮಹತ್ವ ನೀಡುತ್ತಾ ಬಂದಿದ್ದಾರೆ. ಇದಕ್ಕೆ ಕಥೆಯ ಅಂತರ್ಮುಖತೆಯೇ ಕಾರಣವೆಂದು ವಿಮರ್ಶಕರು ಭಾವಿಸುತ್ತಾರೆ. ಪುರುಷ ಪ್ರಧಾನ ಸಂಸ್ಕೃತಿಯ ಸಾತತ್ಯ ಮತ್ತು ಬದಲಾಗುವ ಪರಿಣಾಮ ಅದರಿಂದ ರೂಪಗೊಳ್ಳುವ ಏಡಿಯಂಥ ಪ್ರವೃತ್ತಿಯ ಹೆಣ್ತನ ಇದೆಲ್ಲದರ ಗೋಜಲು ಅವರ ಕಥೆಗಳಲ್ಲಿ ಪ್ರಮುಖವಾಗಿ ಗೋಚರಿಸುವ ಅಂಶಗಳಾಗಿವೆ. ಹಲವು ವಿಮರ್ಶರು ಗುರುತಿಸಿದ ಕಮಲ ದೇಸಾಯಿ ಅವರ ಕಥೆಗಳ ವೈಶಿಷ್ಟ್ಯವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE